ಚಿತ್ರದುರ್ಗ: ಎರಡು ಚಿರತೆಗಳ ನಡುವೆ ಕಾದಾಟ ನಡೆದಿದ್ದು, ಕಾದಾಟದಲ್ಲಿ ಒಂದು ಚಿರತೆ ಮೃತಪಟ್ಟಿದ್ದು ಒಂದು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಗುಂಡೇರಿ ಕಾವಲ್ ಬಳಿ ಎರಡು ಚಿರತೆಗಳು ಕಾದಾಟ ನಡೆಸಿವೆ. ಕಾದಾಟದಲ್ಲಿ ಸುಮಾರು ನಾಲ್ಕು ವರ್ಷ ಪ್ರಾಯದ ಗಂಡು ಚಿರತೆ ಸಾವನ್ನಪ್ಪಿದೆ. ಗಾಯಗೊಂಡಿರುವ ಇನ್ನೊಂದು ಚಿರತೆ ನಾಪತ್ತೆಯಾಗಿದ್ದು, ಅದಕ್ಕಾಗಿ ಅರಣ್ಯ ಅಧಿಕಾರಿ ವಸಂತ್ ಕುಮಾರ್ ನೇತೃತ್ವದಲ್ಲಿ ಹುಡುಕಾಟ ನಡೆಸಿದ್ದು, ಸ್ಥಳೀಯರು ಕೂಡ ಅರಣ್ಯಾಧಿಕಾರಿಗಳಿಗೆ ಸಾಥ್ ನೀಡಿದ್ದಾರೆ. ಸ್ಥಳದಲ್ಲಿಯೇ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಸಂಯುಕ್ತವಾಣಿ