ಚಿತ್ರದುರ್ಗ: ಮುಟ್ಟಿದ್ದೆಲ್ಲಾ ಚಿನ್ನ , ಚಿನ್ನದ ಪದಕಗಳನ್ನೆ ತನ್ನ ಕೊರಳಿಗೆ ಮಾಲೆಯನ್ನಾಗಿ ಮಾಡಿಕೊಂಡಿರುವ ಈ ಯುವತಿ ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಕೋಟೆ ನಾಡು ಚಳ್ಳಕೆರೆ ತಾಲೂಕಿನ ಹಿರೇ ಮಧುರೆಯ ಜಿಹೆಚ್ ಪಿಎಸ್ ಶಾಲೆಯ ಸಹ ಶಿಕ್ಷಕಿಯಾಗಿರುವ ಬಿಟಿ ಗಿರಿಜಮ್ಮ ಅವರ ಪುತ್ರಿ ಬಿ ಎನ್ ಸ್ವಾತಿಮುತ್ತು, ಇವಳು ಬಿಎಎಂಎಸ್ ವೈದ್ಯಕೀಯ ವಿಭಾಗದಲ್ಲಿ 5 ಚಿನ್ನದ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಧರ್ಮಸ್ಥಳದ ವೀರೇಂದ್ರ ಹಗಡೆ ಅವರ ಪ್ರಶಂಸೆಗೆ ಒಳಗಾಗಿ, ಉಚಿತವಾಗಿ ಎಂಎಸ್ ಪದವಿಗೆ (ಸ್ತ್ರೀ ಮತ್ತು ಪ್ರಸೂತಿ) ಪ್ರವೇಶವನ್ನು ಪಡೆದಿದ್ದಾಳೆ. ಈ ವಿಭಾಗದಲ್ಲಿಯೂ ಚಿನ್ನದ ಪದಕವನ್ನು ಪಡೆದು ಇಲ್ಲಿಯೂ ಚಿನ್ನದ ಬೇಟೆಯನ್ನು ಮುಂದುವರೆಸಿದ್ದಾಳೆ. 2019-20 ನೇ ಸಾಲಿನಲ್ಲಿ ನಡೆದ ಬೆಂಗಳೂರಿನ ರಾಜೀವ್ ಗಾಂಧಿ ವಿವಿಯ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರ ಕೈಯಿಂದ ಚಿನ್ನದ ಪದಕಗಳನ್ನು ಪಡೆದು ಜಿಲ್ಲೆಗೆ ಹಾಗೂ ರಾಜ್ಯದ ಹೆಸರನ್ನು ಉತ್ತುಂಗಕ್ಕೆ ಕೊಂಡಯ್ಯೋದಿದ್ದಾಳೆ. ಇದು ಅತ್ಯಂತ ಹೆಮ್ಮೆಯ ವಿಚಾರವಾಗಿದ್ದು, ಈ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಚಳ್ಳಕೆರೆ ತಾಲೂಕು ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಂಯುಕ್ತವಾಣಿ