ಚಿತ್ರದುರ್ಗ: ಡಿಕೆ ಶಿವಕುಮಾರ್ ಬಳಿ ಹೇಳಿಸಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ನಲ್ಲಿ ರಕ್ತಪಾತವಾಗುತ್ತದೆ ಸಿದ್ದರಾಮಯ್ಯ ಡಿಕೆಶಿ ಬಡಿದಾಡಿಕೊಂಡು ಸಾಯುತ್ತಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ಹೇಳಿದರು.
ಅವರು ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಬ್ರಹ್ಮ ವಿದ್ಯಾನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ವಾಗ್ದಾಳಿ ನಡೆಸಿ, ಮೀಸಲಾತಿ ಬಗ್ಗೆ ಸಿದ್ದರಾಮಯ್ಯ ಸಿಎಂ ಆದಾಗ ಏನು ಕಡೆದಿದ್ದರು. ಯಾವ ಸಾಧನೆ ಮಾಡಿದ್ದಾರೆ. ಮೊನ್ನೆ ಸಮಾವೇಶದಲ್ಲಿ ಸಮಾಧಾನ ಮಾಡುವ ಮಾತು ಆಡಲಿಲ್ಲ. ಬದಲಿಗೆ ಸಮಾವೇಶ ನೋಡಿ ಅವರಿಗೆ ಕಿರಿ ಕಿರಿ ಆಗಿದೆ. ಅವರು ಒಂದು ಉತ್ತಮ ಕೆಲಸ ಮಾಡಿದ್ದೆನೆ ಎಂದು ಸಿದ್ದರಾಮಯ್ಯ ಹೇಳಲಿ. ಹಿಂದುಳಿದವರನ್ನ ದಲಿತರನ್ನು ಬಳಸಿಕೊಂಡು ಸಿಎಂ ಆಗಿದ್ದರು. ಸಮೂದಾಯಗಳಿಗೆ ಏನೂ ಮಾಡಲಿಲ್ಲ. ಈಗ ಅವರು ಒಬ್ಬೊಂಟಿ ಆಗಿರುವ ಭಯದಿಂದ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕುರುಬ ಶ್ರೀಗಳ ಹೇಳಿಕೆ ತಡೆಯಲಾಗಲಿಲ್ಲ. ಎಸ್ಟಿ ಮಾಡಿದರೆ ನಮ್ಮ ಸಮೂದಾಯ ಸಂಪೂರ್ಣವಾಗಿ ಮೋದಿಜಿ ಪರ ಇರುತ್ತೇವೆ ಎಂದಿದ್ದು, ಸಿದ್ದರಾಮಯ್ಯ ಅವರಿಗೆ ತಡೆಯಲು ಆಗಿಲ್ಲ. ಇಂತಹ ಸಿದ್ದರಾಮಯ್ಯ ಈಗ ಎಲ್ಲಿ ಇದ್ದಾರೆ ಹೇಳಿ ರಾಜ್ಯದಲ್ಲಿ ಕಾಂಗ್ರೆಸ್ ಇದಿಯಾ? ಜನ ಕಾಂಗ್ರೆಸ್ ಪಕ್ಷವನ್ನು ಮೂಲೆಗೆ ತಳ್ಳಿದ್ದಾರೆ. ಸಮ್ಮಿಶ್ರ ಸರ್ಕಾರ ಒಳ್ಳೆಯ ಕೆಲಸ ಆಗ್ತಾ ಇಲ್ಲ ಎಂದು 17 ಜನ ಬಂದರು. ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದು ಹಗಲು ಕನಸು ಸಿದ್ದರಾಮಯ್ಯ ಅವರ ಸರ್ವಾಧಿಕಾರಿ ಧೋರಣೆಯನ್ನ ರಾಜ್ಯದ ಜನತೆ ಒಪ್ಪಲ್ಲ ಈಗ ಅಹಿಂದ ಬಿಟ್ಟು ಹಿಂದ ಎಂದು ಶುರು ಮಾಡಿದ್ದಾರೆ.ಹಿಂದ ಎನ್ನುವುದನ್ನು ಸಿದ್ದರಾಮಯ್ಯ ಎಂದು ಮುಂದುವರೆಸಲಿ. ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸಂಯುಕ್ತವಾಣಿ