ನಟಿ ರಾಧಿಕಾ ಕುಮಾರಸ್ಚಾಮಿಗೆ ಕಂಟಕವಾಗುತ್ತ ಯುವರಾಜನ. ಸಂಪರ್ಕ

ಕ್ರೈಂ ಜಿಲ್ಲಾ ಸುದ್ದಿ

ಬೆಂಗಳೂರು: ವಂಚಕ ರಮೇಶ್ ಅಲಿಯಾಸ್ ಸಂಗನ ಬಸವಶ್ರೀ ಅಲಿಯಸ್ ಯುವರಾಜ್ ನ ವಂಚನೆಗಳು ಒಂದೊಂದೆ ಬಯಲಾಗುತ್ತಿದ್ದು, ಇದೀಗ ಇವನ ಜೊತೆ ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿ‌ಬರುತ್ತಿದ್ದು, ಇವರ ಹೆಸರಿಗೆ ಬರೊಬ್ಬರಿ ಕೋಟ್ಯಾಂತರ ಹಣ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Chitradurga vanchaka yuvaraj  caseChitradurga vanchaka yuvaraj  case

 

 

 

ಚಿತ್ರದುರ್ಗ ತಾಲೂಕಿನ ದೇವಪುರದ ಹಟ್ಟಿ ಗ್ರಾಮದ ರಮೇಶ್ ಸೇವಾಲಾಲ್ ಸ್ವಾಮೀಜಿಯಾಗಿ ದೀಕ್ಷೆ ಪಡೆದು ನಂತರ ತ್ಯಜಿಸಿದ್ದು ಇದೀಗ ಇತಿಹಾಸ. ನಂತರದಲ್ಲಿ ಅವನು ಯುವರಾಜನಾಗಿ ಬಿಜೆಪಿಯ ಗಣ್ಯಾತೀ ಗಣ್ಯರ ಹೆಸರು ಹೇಳಿಕೊಂಡು ಅವರುಗಳ ಜೊತೆ ಫೋಟೋ ತೆಗೆಸಿಕೊಂಡು ರಾಜಕೀಯ ವ್ಯಕ್ತಿಗಳಿಗೆ ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ರಾಜ್ಯಪಾಲರಾಗಿ ನೇಮಕ ಹೀಗೆ ಆಸೆ ಅಮೀಷಗಳನ್ನು ಒಡ್ಡಿ ಕೋಟ್ಯಾಂತರ ಹಣ ವಂಚಿಸಿದ್ದ, ಈತನ ವಿರುದ್ದ ಸುಧೀಂದ್ರ ರೆಡ್ಡಿ ಪ್ರಕರಣ ದಾಖಲು ಮಾಡಿದ್ದರು. ಇದರ ಬೆನ್ನು ಹತ್ತಿದ್ದ. ಸಿಸಿಬಿ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಇದೀಗ ಮತ್ತೆ ಅವನನ್ನು ವಿಚಾರಣೆ ಮಾಡಲು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶಾಕಿಂಗ್ ಮಾಹಿತಿಗಳು ಹೊರ ಬೀಳುತ್ತಿವೆ. ಈತನ ಸಂಪರ್ಕದಲ್ಲಿ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿ ಬರುತ್ತಿದೆ. ವಂಚಕ ಸ್ವಾಮೀಜಿ ನಟಿಯ ಖಾತೆಗೆ ಸುಮಾರು 1.25 ಕೋಟಿ ವರ್ಗಾವಣೆ ಮಾಡಿರುವ ಶಂಕೆಯೂ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೆ ನಟಿಯ ಸಹೋದರನ ಖಾತೆಗೆ 75 ಲಕ್ಷ ಹಣವೂ ವರ್ಗಾವಣೆಯಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ನಯವಾಗಿ ಜನರನ್ನು ವ‌ಂಚಿಸುತ್ತಿದ್ದ ಕಳ್ಳ ಸ್ವಾಮೀಜಿ ಸುಮಾರು 47 ಬ್ಯಾಂಕ್ ಅಕೌಂಟ್ ಗಳನ್ನು ಹೊಂದಿದ್ದಾನೆ. ಇವುಗಳ ಮೂಲಕ ಹಣ ವ್ಯವಹಾರಗಳನ್ನು ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈತನ ಮೇಲೆ ಈಗ 8 ಪ್ರಕರಣಗಳು ದಾಖಲಾಗಿದ್ದು, ತನಿಖೆಯು ನಡೆಯುತ್ತಿದೆ. ಈತನ ಸಂಪರ್ಕದಲ್ಲಿರುವ ಖ್ಯಾತ ನಟಿ ರಾಧಿಕಾ ಕುಮಾರಸ್ಚಾಮಿಗೆ ಕಂಟಕ ಶರುವಾಗುತ್ತಾ ನೋಡಬೇಕು.

ಸಂಯುಕ್ತವಾಣಿ

Leave a Reply

Your email address will not be published. Required fields are marked *