ಮೈಸೂರು ಡಿಸಿಗೆ ಪಾಠ ಮಾಡಿದ ಸಚಿವ ಆಶೋಕ್

ಜಿಲ್ಲಾ ಸುದ್ದಿ

ಮೈಸೂರು: ಮೈಸೂರು ಜಿಲ್ಲಾಧಿಕಾರಿ‌ರೋಹಿಣಿ ಸಿಂಧೂರಿಗೆ ಜನಪ್ರತಿನಿಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಲಾಗಿದೆ ಎಂದು ಕಂದಾಯ ಸಚಿವ ಆರ್ ಆಶೋಕ್ ಹೇಳಿದ್ದು ಇದರ ಮೂಲಕ ಶಾಸಕರು ಹಾಗೂ ಜಿಲ್ಲಾಧಿಕಾರಿ ನಡುವೆ ಕಿತ್ತಾಟಕ್ಕೆ ತೆರೆ ಎಳೆದಿದ್ದಾರೆ.

 

 

 

Chitradurga minister ashok gave e lecturer to mys dc
ಮೈಸೂರಿನಲ್ಲಿ‌ ಇಂದು‌ ನಡೆಯಬೇಕಾಗಿದ್ದ ಜನ ಸ್ಪಂದನಾ ಸಭೆಯನ್ನು ರದ್ದು‌ಮಾಡಿದ ಆಶೋಕ್ ಮಾಧ್ಯಮಗಳೊಂದಿಗೆ ಮಾತನಾಡಿ, ರೋಹಿಣಿ ಸಿಂಧೂರಿ ಅವರು ನನ್ನನ್ನು ಭೇಟಿ‌ ಮಾಡಿದ್ದರು. ಅವರಿಗೆ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟನೆಗೆ ಶಾಸಕರನ್ನು ಕರೆಯಲೇಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ನಡೆಗೆ ಗ್ರಾಮದ ಕಡೆಗೆ ಕಾರ್ಯಕ್ರಮವಿರುತ್ತದೆ. ಇದಕ್ಕಾಗಿ‌ ಮಾರ್ಗ ಸೂಚಿಗಳು ಸಿದ್ದಪಡಿಸಲಾಗುತ್ತಿದೆ. ಆ ವೇಳೆಯಲ್ಲಿ‌ ಜನರ. ಸಮಸ್ಯೆಗಳನ್ನು ಆಲಿಸಲಾಗುತ್ತದೆ. ಪರಿಹಾರವನ್ನು ಕೂಡ ನೀಡಲಾಗುತ್ತದೆ ಎಂದು ಆಶೋಕ್ ಹೇಳಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *