Chitradurga hiriyur municipality power has got congress

ಪೂರ್ಣಿಮಾ ಶ್ರೀನಿವಾಸ್ ಸಚಿವರಾಗ್ತಾರೆ : ವಿನಯ್ ಗೂರೂಜಿ ಭವಿಷ್ಯ

ಜಿಲ್ಲಾ ಸುದ್ದಿ

ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಸಚಿವರಾಗ್ತಾರೆ : ಅವಧೂತ ವಿನಯ್ ಗುರೂಜಿ …!

ಚಿತ್ರದುರ್ಗ : ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಮಂತ್ರಿ ಆಗ್ತಾರೆ..? ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.

 

 

 

  1. Chitradurga Poornima srinivas WL become minister

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಗುರೂಜಿ ಶಾಲೆ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಐದು ನಿಮಿಷಗಳ ಕಾಲ ತಡವಾಗಿ ಬಂದ ಶಾಸಕಿ ಕೆ ಪೂರ್ಣಿಮಾ ಅವಧೂತರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡರು. ಇದೇ ವೇಳೆ ಪ್ರಾಂಶುಪಾಲರ ಕೊಠಡಿ ವೀಕ್ಷಿಸಲು ಜೊತೆಗೆ ಆಗಮಿಸುವಾಗ ಅವಧೂತರು ” ನೀವು ಮಂತ್ರಿ ಸ್ಥಾನಕ್ಕೆ ಪ್ರಯತ್ನ ಮಾಡಿದ್ದಿರಾ ಎಂದು ಗುರೂಜಿ ಶಾಸಕರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಭಗವಂತನ ಕೃಪೆ ಇದ್ದರೆ ಆಗುತ್ತದೆ ಎಂದು ಮುಗುಳು ನಗುತ್ತಾ ಮುಂದೆ ಬಂದರು. ಪೂರ್ಣಿಮಾ ಅವರು ಉನ್ನತ ಹುದ್ದೆಗೆ ನೀವು ಹೋಗ್ತೀರೆ ಎಂದು ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ ಎನ್ನಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

 

ಸಂಯುಕ್ತವಾಣಿ

Leave a Reply

Your email address will not be published. Required fields are marked *