ಹದಿನೈದು ದಿನಗಳಲ್ಲಿ‌ ಬೆಳೆ ಪರಿಹಾರ !!

ಜಿಲ್ಲಾ ಸುದ್ದಿ

ಚಿತ್ರದುರ್ಗ ತಾಲ್ಲೂಕಿನ ಹಲವು ಗ್ರಾಮಗಳಿಗೆ ಕಂದಾಯ ಸಚಿವ ಆರ್ ಅಶೋಕ್ ಬೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿದ್ರು

 

 

 

ಇನ್ನೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಬಾರಿ ಮಳೆ ಸುರಿಯುತ್ತಿದ್ದು ಹಲವು ಬಾಗಗಳಲ್ಲಿ ಮೆಕ್ಕೆಜೋಳ ಅವರೇ ಸೇರಿದಂತೆ ಹಲವು ಜಮೀನುಗಳಲ್ಲಿ ನೀರು ನಿಂತಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದ್ದು ಕಂಡು ಬಂದಿದೆ. ಇನ್ನೂ ಈ ಹಿನ್ನೆಲೆಯಲ್ಲಿ ಇಂದು ಕಂದಾಯ ಸಚಿವ ಆರ್ ಅಶೋಕ್ ಅವರು ಬೇಟಿ ಕೊಟ್ಟಿದ್ದು ತಾಲ್ಲೂಕಿನ ಸಿರಿಗೆರೆ, ಆಲಘಟ್ಟ, ದೊಡ್ಡಾಲಘಟ್ಟ ಸೇರಿದಂತೆ ವಿವಿದ ಗ್ರಾಮಗಳಿಗೆ ಆರ್ ಅಶೋಕ್ ಅವರು ಬೇಟಿ ಕೊಟ್ಟಿದ್ದು ಬೆಳೆ ಹಾನಿಯಾದ ಪ್ರದೇಶಗಳಿಗೆ ಬೇಟಿ ಕೊಟ್ಟಿದ್ದು ಪರಿಶೀಲನೆಯನ್ನ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಶೀಘ್ರದಲ್ಲೇ ಬೆಳೆ ಹಾನಿ ಕುರಿತಾದ ಪಟ್ಟಿ ಸಿದ್ದ ಪಡಿಸಿ ಹಾನಿ ಕುರಿತಾದ ವರದಿಯನ್ನ ತರಿಸಿಕೊಂಡು ಸರ್ಕಾರದಿಂದ ನೊಂದ ರೈತರಿಗೆ ಪರಿಹಾರ ಒದಗಿಸುವ ಕೆಲಸ ಮಾಡುವುದಾಗಿ ಆರ್ ಅಶೋಕ್ ಅವರು ಭರವಸೆಯನ್ನ ಕೊಟ್ಟಿದ್ದಾರೆ. ಇನ್ನೂ ಈ ಸಂದರ್ಭಗಳಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎ ಮುರಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು

Leave a Reply

Your email address will not be published. Required fields are marked *