ಚಿತ್ರದುರ್ಗ,: ದೇಶವನ್ನು ಮುನ್ನಡೆಸುವ ಸಮರ್ಥ ನಾಯಕತ್ವ ರಾಹುಲ್ ಗಾಂಧಿ ಅವರಿಗಿದ್ದು, ಇವರ ವಿರುದ್ಧ ಬಿಜೆಪಿ ದೊಡ್ಡ ಷಡ್ಯಂತರವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆವರು ಆರೋಪಿಸಿದರು.
ಚಿತ್ರದುರ್ಗ ತಾಲ್ಲೂಕು ಚನ್ನಯ್ಯನಹಟ್ಟಿ ದಲಿತ ಕಾಲೋನಿಯಲ್ಲಿ ಕೋರೋನಾ ಜಾಗೃತಿ ಹಾಗೂ ರಾಹುಲ್ ಗಾಂಧಿ ಜನ್ಮದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸ್ಥಳೀಯ ನಿವಾಸಿಗಳಿಗೆ ಸಿಹಿ ವಿತರಿಸಿ ಮಾಜಿ ಸಚಿವರು ಮಾತನಾಡಿದರು.
ಕೋರೋನಾ ಸೋಂಕು ಚೀನಾ ದೇಶದಲ್ಲಿ ಕಾಣಿಸಿಕೊಂಡು ವಿವಿಧ ದೇಶಗಳಿಗೆ ಪ್ರವೇಶ ಮಾಡುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಕುರಿತು ಮೊದಲೇ ಮುನ್ನೇಚ್ಚರಿಕೆಯನ್ನು ನೀಡಿದ್ದರು. ಅದರೆ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅವರ ಸಲಹೆಯನ್ನು ಉದಾಸೀನ ಮಾಡಿ ದೇಶದೊಳಗೆ ಕೋರೋನಾ ಸೋಂಕು ಪ್ರವೇಶಿಸಿ ವ್ಯಾಪಿಸಲು ಕಾರಣರಾದರು ಎಂದರು.
ಇಂಧಿರಾಗಾಂಧಿ ರೀತಿ ರಾಹುಲ್ ಗಾಂಧಿ ಅವರು ಜನ ಸಾಮಾನ್ಯರೊಂದಿಗೆ ಬೆರೆಯುವ ರೀತಿ, ಮಾಧ್ಯಮದವರೊಂದಿಗೆ ಆಗುವ ಮುಖಾಮುಖಿ, ಸರಳತೆ, ನಿಸ್ವಾರ್ಥ ನಡೆ ಕಂಡು ಬೆಚ್ಚಿರುವ ಬಿಜೆಪಿ, ರಾಹುಲ್ ಗಾಂಧಿ ಅವರ ಕೈಗೆ ಅಧಿಕಾರ ಸಿಕ್ಕರೆ ಮರಳಿ ಬಾರದು ಎಂದು ಅವರ ನಾಯಕತ್ವವನ್ನು ದುರ್ಬಲಗೊಳಿಸಲು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಜನ ಬಹಳಷ್ಟು ಪ್ರಬುದ್ಧರಾಗಿದ್ದು, ಬಿಜೆಪಿ ಸುಳ್ಳುಗಳನ್ನು ಅರಿತಿದ್ದಾರೆ.
ರೆಫೆಲ್ ವಿಮಾನ ಖರೀದಿಯಲ್ಲಿ ಆಗಿರುವ ಹಗರಣ ಕುರಿತು ಲೋಕಸಭೆಯನ್ನು ರಾಹುಲ್ ಗಾಂಧಿ ಮಂಡಿಸಿದ ವಿಚಾರಕ್ಕೆ ಹಿರಿಯ ಸಂಸದೀಯ ಪಟುಗಳೇ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಹಗರಣ ಕುರಿತು ಕೇಂದ್ರ ಸರ್ಕಾರ ತನಿಖೆಗೆ ಒಪ್ಪಿಸಲಿಲ್ಲ. ಈಗ ಮಾಧ್ಯಮಗಳಲ್ಲಿ ರೆಫೆಲ್ ಹಗರಣ ಕುರಿತು ಸರಣಿ ವರದಿ ಬರುತ್ತಿದೆ. ಇದು ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದಕ್ಕೆ ಸಾಕ್ಷಿಯಾಗಿದೆ.
ಸೋನಿಯಾಗಾಂಧಿ, ರಾಹುಲ್ ಗಾಂಧಿ ಮನಸ್ಸು ಮಾಡಿದ್ದರೆ ತಾವೇ ಸ್ವತಃ ಪ್ರಧಾನಿ ಆಗಬಹುದಿತ್ತು. ಆದರೆ ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಏನೆ ಷಡ್ಯಂತರ ನಡೆಸಿದರೂ ದೇಶದ ಚುಕ್ಕಾಣಿ ದೊರೆಯುವ ಕಾಲ ಸನ್ನೀತವಾಗಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಅವರು ಪ್ರಧಾನಿ ಆಗುವುದು ನಿಶ್ಚಿತ. ಅವರಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಕಳೆದುಕೊಂಡ ಘನತೆ ಮರಳಿ ಬರಲಿದೆ. ದೇಶ ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಲಿದೆ ಎಂದು ಆಂಜನೇಯ ಹೇಳಿದರು.
ಹಳ್ಳಿಗಳಿಗೆ ಸೊಂಕು ಪ್ರವೇಶಿಸಿದ್ದು, ಹಳ್ಳಿಯ ಜನರು ಬಹಳಷ್ಟು ಜಾಗೂರುತೆ ವಹಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೂಚಿಸುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಮಾಸ್ಕ್ ಧರಿಸಬೇಕು. ಸಮಾಜಿಕ ಅಂತರ ಇರಬೇಕು. ಸ್ವಚ್ಚತೆಗೆ ಅದ್ಯತೆ ನೀಡಬೇಕಿಉ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಂ.ಕೆ.ತಾಜ್ಪೀರ್ ಅವರು ಮಾತನಾಡಿ, ರಾಹುಲ್ ಗಾಂಧಿ ಅವರು ಅಧಿಕಾರಕ್ಕಾಗಿ ಎಂದೂ ಹಪಾಹಪಿಸಿಲ್ಲ. ದೇಶ ಬಲಿಷ್ಠವಾಗಬೇಕು. ರೈತರು, ಕಾರ್ಮಿಕರು, ಅಶಕ್ತ ಜನರು ಶಕ್ತರಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದಾರೆ. ಇಂತಹ ನಾಯಕ ಪ್ರಧಾನಿ ಆದರೆ ಎಲ್ಲ ವರ್ಗದ ಜನ ನೆಮ್ಮದಿ ಜೀವನ ನಡೆಸಲು ಸಹಕಾರ ಆಗಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಸದಸ್ಯ ತಿಪ್ಪೇಶ್, ರಂಗನಾಯಕ, ಲಿಡ್ಕ್ರ್ ಮಾಜಿ ಅಧ್ಯಕ್ಷರಾದ ಓ.ಶಂಕರ್, ಜಿಲ್ಲ ಪಂಚಾಯತ್ ಮಾಜಿ ಸದಸ್ಯ ನರಸಿಂಹರಾಜು, ಕಾಂಗ್ರೆಸ್ ಎಸ್ಸಿ ತಾಲ್ಲೂಕು ಅಧ್ಯಕ್ಷ ಅನಿಲ್ ಕೋಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಪ್ರಸನ್ನ ಜಯ್ಯಣ್ಣ, ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಮಹಡಿ ಶಿವಮೂರ್ತಿ, ತಿಮ್ಮಣ್ಣ, ತಿಪ್ಪೇಸ್ವಾಮಿ, ರಾಜಣ್ಣ ಇತರ ಗಣ್ಯರು ಇದ್ದರು.