ಅಸಹಾಯಕರು ಸೌಲಭ್ಯ ವಂಚಿತರಾಗಬಾರದು

ಜಿಲ್ಲಾ ಸುದ್ದಿ

ಅಬ್ದುಲ್ ನಜೀರ್ ಸಾಬ್  ಗ್ರಾಮೀಣಾಭಿವೃದ್ಧಿಯ ಕಲ್ಪನೆ ಕಂಡವರು ಅವರು ಮಹಾತ್ಮ ಗಾಂಧೀಜಿ ಹಾಕಿಕೊಟ್ಟ ನೈರ್ಮಲೀಕರಣದ ಉದಾತ್ತ ವಾದ ಕನಸು ಹೊಂದಿರುವ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ತಮ್ಮದೇ  ಕೊಡುಗೆ ನೀಡಿ ಹೋದಂತವರು ಇವರ ಆದರ್ಶಗಳನ್ನು ಇವರು ಇಲಾಖೆಯಲ್ಲಿ ಇಟ್ಟುಕೊಂಡಿರುವ ಕನಸನ್ನು ಮನಸು ಮಾಡುವಂತ ಹೊಣೆಗಾರಿಕೆ ಮತ್ತು ಕರ್ತವ್ಯ ಅಧಿಕಾರಿಗಳಾದ ನಮ್ಮ ನಿಮ್ಮ ಮೇಲೆ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರ ಮೇಲಿದೆ ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು. ಅವರು ನಗರಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಶ್ರೀ ಕುಮಾರಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿ ಮಾತನಾಡಿ ಈ ದಿನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವಂತ ಕುಮಾರಸ್ವಾಮಿ ಅವರು ಸರ್ಕಾರದ ಯೋಜನೆಗಳ ಗಣವಾಗಿ ಸವಲತ್ತುಗಳನ್ನು ಪ್ರತಿಯೊಬ್ಬ ಅಸಹಾಯಕರು ಅಮಾಯಕರು ಮತ್ತು ಶೋಷಿತರಿಗೆ ನೀಡುವ ನಿಟ್ಟಿನಲ್ಲಿ ಇವತ್ತು ಒಂದು ದೀಕ್ಷೆ ತೆಗೆದುಕೊಳ್ಳಬೇಕು ಈ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಯಾವುದೇ ಅಸಹಾಯಕರು ಸೌಲಭ್ಯ ವಂಚಿತರಾಗಬಾರದು ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಈ ವರ್ಗದ ಜನರಿಗೆ ಯಾವ ಸೌಲಭ್ಯಗಳಿವೆ ಎಂದು ತಿಳಿದು ಆ ಸೌಲಭ್ಯಗಳನ್ನು ಇಂತಹ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ಪಂಚಾಯಿತಿ ಸದಸ್ಯರೊಂದಿಗೆ ಸಮನ್ವಯ ಮಾಡಿಕೊಂಡು ಪಂಚಾಯಿತಿ ಒಳ್ಳೆಯ ಪ್ರಗತಿ ದತ್ತ ಕೊಂಡೊಯಲು ಸಹಕಾರಿಯಾಗಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ನೂತನವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀ ಕುಮಾರಸ್ವಾಮಿ ಮತ್ತು ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು

 

 

 

Leave a Reply

Your email address will not be published. Required fields are marked *