ಚಿತ್ರದುರ್ಗದ ಮುರುಘಾ ಮಠದ ಮುರುಘಾ ಸ್ವಾಮೀಜಿ ವಿರುದ್ಧ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಸೌಭಾಗ್ಯ ಬಸವರಾಜನ್ ಅವರನ್ನು ಗ್ರಾಮಾಂತರ ಠಾಣೆ ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ.
ಸೌಭಾಗ್ಯ ಬಸವರಾಜನ್ ಅವರು ಮಠದ ಮಾಜಿ ಅಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಅವರ ಪತ್ನಿಯಾಗಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದರು, ವಶಕ್ಕೆ ಪಡೆದಿರುವ ಪೋಲಿಸರು ಚಿತ್ರದುರ್ಗದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಬಿಟ್ಟಿದ್ದಾರೆ.ಇಂದು ಅವರ ವಿಚಾರಣೆಯನ್ನು ಪೋಲಿಸರು ನಡೆಸಲಿದ್ದಾರೆ. ನವೆಂಬರ್ 9 ರಂದು ಗ್ರಾಮಾಂತರ ಠಾಣೆಯಲ್ಲಿ ಪಿತೂರಿ ಪ್ರಕರಣ ದಾಖಲಾಗಿತ್ತು. ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಅವರು ಮುರುಘಾ ಶ್ರೀ ವಿರುದ್ದ ಸುಳ್ಳು ದೂರು ನೀಡಲು ಸೌಭಾಗ್ಯ ಬಸವರಾಜನ್ ಪ್ರಚೋದಿಸಿದ್ದರು ಎಂದು ದೂರು ನೀಡಿದ್ದರು.ಇದರ ಜೊತೆಗೆ ಸಂತ್ರಸ್ತೆಗೆ ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರ ಪ್ರಚೋದನೆ ನೀಡಿದ ಆಡಿಯೋ ವೈರಲ್ ಆಗಿತ್ತು. ಬಸವರಾಜೇಂದ್ರ ಅವರನ್ನು ಬಂಧಿಸಿ ವಿಚಾರಣೆಯನ್ನು ಪೋಲಿಸರು ನಡೆಸಿದ್ದರು, ನವೆಂಬರ್ 10 ರಂದು ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಅವರನ್ನು ಬಂಧಿಸಿದ್ದರು, ಆದರೆ ಇದುವರೆಗೂ ಬಸವರಾಜನ್ ಅವರು ನಾಪತ್ತೆಯಾಗಿದ್ದರು, ನಿನ್ನೆ ರಾತ್ರಿ ಬಂಧಿಸಿದ್ದಾರೆ.