ನಾನೊಬ್ಬ ಸಹೋದರನಾಗಿ ಬಂದಿದ್ದೇನೆ : ಕಿಚ್ಚ ಸುದೀಪ್

ಸಿನೆಮಾ

ನಾನೊಬ್ಬ ಕಲಾವಿದನಾಗಿ ಇಲ್ಲಿಗೆ ಬಂದಿಲ್ಲ ನಾನು ಒಬ್ಬ ಸಹೋದರನಾಗಿ ಆಡಿಯೋ ಲಾಂಚ್ ಮಾಡಲು ಬಂದಿದ್ದೇನೆ ಎಂದು ಕಿಚ್ಚ ಸುದೀಪ್ ಹೇಳಿದರು ಅವರು ಚಿತ್ರದುರ್ಗದ ಹಳೆ ಮಾಧ್ಯಮಿಕ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ವೇದ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಮಾತನಾಡಿದರು ಇದು ನಮ್ಮ ಸಿನಿಮಾ ಚೆನ್ನಾಗಿರಬೇಕು ಈ ಸಿನಿಮಾದ ಹಾಡನ್ನು ಬಿಡುಗಡೆ ಮಾಡಿದ್ದೇನೆ ಇವರನ್ನು ನೋಡಿದರೆ ನಮಗೆಲ್ಲ ಖುಷಿಯಾಗುತ್ತದೆ ಇನ್ನು 29 ವಯಸ್ಸಿನವರಂತೆ ಹಾಡಿ ಕುಣಿಯುತ್ತಾರೆ ಎಂದು ಹೇಳಿದರು ನೀವು ಹೀಗೆ ನೃತ್ಯ ಮಾಡಿದರೆ ನಮಗೆ ಸಮಸ್ಯೆ ಆಗುತ್ತದೆ ಎಂದು ನನಗೆ ಚಟಾಕಿ ಹಾರಿಸಿದರು, ಚಿತ್ರದುರ್ಗಕ್ಕೆ ಬಂದಿದ್ದು ನನಗೆ ಸಂತೋಷವಾಗಿದೆ ಬಹಳಷ್ಟು ದಿನಗಳು ನಾನು ಇಲ್ಲಿ ಕಾರ್ಯಕ್ರಮ ಮಾಡಬೇಕೆಂದು ಕೊಂಡಿದ್ದು ಆದರೆ ಆಗಲಿಲ್ಲ ಆದರೆ ವೇದ ಚಿತ್ರದ ಮೂಲಕ ನಾನು ಇಲ್ಲಿಗೆ ಬರುವಂತಾಯಿತು ಅದಕ್ಕೆ ಸಂತಸ ತಂದಿದೆ, ಚಿತ್ರದುರ್ಗವೆಂದರೆ ಬಹಳ ನೆನಪು ಚಿತ್ರದ ಚಿತ್ರೀಕರಣವಾಗಿತ್ತು. ಆ ಸಿನಿಮಾ ಇಲ್ಲದೆ ನಾನಿಲ್ಲ ಈ ಊರಿಲ್ಲದೆ ಆ ಸಿನಿಮಾ ಇಲ್ಲ ನಿನ್ನಂತಾಗಿದೆ. ಗೀತಾ ಶಿವರಾಜಕುಮಾರ್ ಅವರ ಮೊದಲನೇ ನಿರ್ಮಾಣ ಇಷ್ಟು ವರ್ಷಗಳು ಕಾಲ ಶಿವಣ್ಣ ಅವರು ಬೇರೆಯವರ ನಿರ್ಮಾಣದಲ್ಲಿ ಚಿತ್ರದಲ್ಲಿ ಅಭಿನಯಿಸುತ್ತಿದ್ದರು, ಈಗ ಅವರದೇ ಆದ ನಿರ್ಮಾಣ ಸಂಸ್ಥೆಯಲ್ಲಿ ಅಭಿನಯಿಸುತ್ತಿದ್ದಾರೆ. ಬಹಳ ವರ್ಷಗಳ ಹಿಂದೆ ನಾನು ಚಿತ್ರರಂಗಕ್ಕೆ ಬಂದಾಗ ನಾನು ಯಾರು ಅಲ್ಲ ನನ್ನ ಸಿನಿಮಾ ಸ್ಪರ್ಶ ಚಿತ್ರ, ಬಿಡುಗಡೆ ಸಂದರ್ಭದಲ್ಲಿ ಇಂಡಿಯಾ ಪಾಕಿಸ್ತಾನ ಮ್ಯಾಚ್ ನಿಂತಿತ್ತು ಜನರು ಬರುವುದಿಲ್ಲ ಎಂದು ಹೇಳುತ್ತಿದ್ದರು ಆಗ ನನಗೆ ನನ್ನ ಸಹಾಯಕ್ಕೆ ಬಂದವರು ಶಿವಣ್ಣ ಎಂದು ನೆನಪಿಸಿಕೊಂಡರು, ಸಂಜೆ 5:00 ನನಗಾಗಿ ಕಾಯುತ್ತಿದ್ದೀರಿ ಎಂದು ಎಲ್ಲಿ ಹೇಳಿದ್ರು ಅದಕ್ಕಾಗಿ ನಿಮ್ಮೆಲ್ಲರಿಗೂ ನಾನು ಧನ್ಯವಾದಗಳು ಎಂದರು ಇಡೀ ವೇದ ಚಿತ್ರ ತಂಡಕ್ಕೆ ಆಲ್ ದ ಬೆಸ್ಟ್ ಹೇಳುತ್ತೇನೆ. ನನ್ನ ಕಾರ್ಯಕ್ರಮ ಒಂದು ಆಗಬೇಕೆಂಬ ಆಸೆ ಇದೆ ಖಂಡಿತ ಆಸೆಯನ್ನು ಪೂರೈಸುತ್ತೇನೆ ಎಂದು ಹೇಳಿದರು.ಇದಕ್ಕೂ ಮುನ್ನ ಮಾತನಾಡಿದ ಡಾ.ಶಿವರಾಜ್ ಕುಮಾರ್,ಚಿತ್ರದುರ್ಗದಲ್ಲಿ ನನ್ನ ನಾಲ್ಕು ಚಿತ್ರಗಳ ಕಾರ್ಯಕ್ರಮಗಳು ನಡೆದಿದ್ದು ಅವೆಲ್ಲವೂ ಕೂಡ ಯಶಸ್ವಿಯಾಗಿದೆ ಚಿತ್ರಗಳು ಕೂಡ ಯಶಸ್ಸನ್ನು ಕಂಡಿದೆ ಎಂದು ಡಾಕ್ಟರ್ ಶಿವರಾಜ್ ಕುಮಾರ್ ಹೇಳಿದರು ಅವರು ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ತಮ್ಮದೇ ಚಿತ್ರವಾದ ವೇದಾ ಚಿತ್ರದ ಹಾಡು ಬಿಡುಗಡೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಲ್ಲಿ ಕಾರ್ಯಕ್ರಮ ಮಾಡಲು ಬಹಳಷ್ಟು ಖುಷಿಯಾಗುತ್ತದೆ. ಇಲ್ಲಿ ಒಂದು ಕಾರ್ಯಕ್ರಮ ಮಾಡಲೇಬೇಕೆಂದು ಅಂದುಕೊಂಡು ಅದೇ ರೀತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಚಿತ್ರದಲ್ಲಿ ಸ್ಥಳೀಯ ಗಾಯಕನ ಹಾಡನ್ನು ಬಳಸಿಕೊಂಡು ಮಾಡಿರುವ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. ಹಾಡು ಬಿಡುಗಡೆಯನ್ನು ಮಾಡುವಂತೆ ಸುದೀಪ ಅವರನ್ನು ಕೇಳಿಕೊಂಡಾಗ ಅವರು ಬಹಳಷ್ಟು ಆತ್ಮೀಯತೆಯಿಂದ ಒಪ್ಪಿಕೊಂಡಿದ್ದರು, ಪ್ರತಿಯೊಬ್ಬ ನಟನು ಕೂಡ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತೇವೆ ಅವರ ಚಿತ್ರಗಳಿಗೆ ನಾವು ಹೋಗುತ್ತೇವೆ ನಮ್ಮ ಚಿತ್ರಗಳಿಗೆ ಅವರು ಬರುತ್ತಾರೆ, ಸುದೀಪ್ ಅವರು ಬಂದಿರುವುದು ನಮಗೆ ಬಹಳ ಸಂತಸ ತಂದಿದೆ. ಇದೇ ತಿಂಗಳ 23ರಂದು ಸಿನಿಮಾ ಥಿಯೇಟರ್ ಗಳಲ್ಲಿ ಬರಲಿದೆ ಸಿನಿಮಾ ನೋಡಿ ಎಲ್ಲರಿಗೂ ಕೂಡ ಇಷ್ಟವಾಗುತ್ತದೆ ಎಂದರು

 

 

 

Leave a Reply

Your email address will not be published. Required fields are marked *