ಹಿರಿಯೂರು ತಾಲ್ಲೂಕಿನ ಕಿರ್ಲೋಸ್ಕರ್ ಪೆರಸ್ ಲಿಮಿಟೆಡ್ ಕಂಪನಿ ವತಿಯಿಂದ ತಾಲ್ಲೂಕಿನ ಜವನಗೊಂಡನಹಳ್ಳಿ, ವಸಂತನಗರ, ಎಂ.ಡಿ.ಕೋಟೆ, ಪಿಲಾಲಿ, ಅಂಬಲಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ರೂ.12 ಲಕ್ಷ ವೆಚ್ಚದಲ್ಲಿ ಒಟ್ಟು 72.00 ಲಕ್ಷ ವೆಚ್ಚದ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಶಾಸಕಿ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ ಟಿ ಶ್ರೀನಿವಾಸ ರವರು, ಕಿರ್ಲೋಸ್ಕರ್ ಪೆರಸ್ ಲಿಮಿಟೆಡ್ ಕಂಪನಿ ಎಂ ಡಿ ಗುಮಾಸ್ತೆ, ವಿಪಿ ನಾರಾಯಣ, ಹರೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಗದಾಂಬ, ಮಾಜಿ ಅಧ್ಯಕ್ಷ ಟಿ ತಿಮ್ಮರಾಯಪ್ಪ, ಮುಖಂಡರಾದ ಚಂದ್ರಾ ನಾಯ್ಕ, ತಿರುಮಲೇಶ್, ಮಹಾಲಿಂಗಪ್ಪ, ಈರಗುಂಡಪ್ಪ, ಕೆಂಚಪ್ಪ, ಕಮಲಮ್ಮ, ನಾಗಣ್ಣ, ಅಲ್ತಾಫ್, ಗಿಯಾಸ್, ಚೌಕತ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಮುರುಳಿ, ನಾಗರಾಜ್, ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಿ : 8660924503