ಎರಡು ಲಕ್ಷಕ್ಕೆ ರಘು ಆಚಾರ್ ಪಾಲಾದ ಹಣ್ಣಿನ ಬುಟ್ಟಿ

ರಾಜ್ಯ

ಬಹಿರಂಗ ಹರಾಜಿನಲ್ಲಿ ಹಿಂದೂ ಮಹಾ ಗಣಪತಿಯ ಹಣ್ಣಿನ‌ಬುಟ್ಟಿ ರಘು ಆಚಾರ್ ಪಾಲು

 

 

 

ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದ ದಳದ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಹಿಂದೂ‌ಮಹಾ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು, ಅದರ ಬೃಹತ್ ಶೋಭಾ ಯಾತ್ರೆಯು ಇಂದು ನಡೆಯುತ್ತಿದೆ. ಇಂದು ಮಠಾಧೀಶರು, ಸ್ಥಳೀಯ ಶಾಸಕ ತಿಪ್ಪಾರೆಡ್ಡಿ ಸಮ್ಮುಖದಲ್ಲಿ ಗಣಪತಿಯ ಹಣ್ಣಿನ ಬುಟ್ಟಿಯನ್ನು ಬಹಿರಂಗ ಹರಾಜು ಹಾಕಲಾಯಿತು. ಬಹಿರಂಗ ಹರಾಜಿನಲ್ಲಿ ಹಣ್ಣಿನ ಬುಟ್ಟಿಯೂ 75 ಸಾವಿರದಿಂದ ಪ್ರಾರಂಭವಾಯಿತು. ಬಹಿರಂಗ ಹರಾಜಿನಲ್ಲಿ ಮೂರ್ನಾಲ್ಕು ಜನರು ಭಾಗವಹಿಸಿದ್ದು, ಮಾಜಿ ಎಂಎಲ್ ಸಿ‌ ರಘು ಆಚಾರ್ ಕೂಡ ಹಿಂದೂ‌ ಮಹಾ ಗಣಪತಿಯ ದರ್ಶನ ಪಡೆದು ಭಾಗಿಯಾಗಿದ್ದರು. ಹರಾಜಿನಲ್ಲಿ‌ಗಣಪತಿಯ ಹಣ್ಣಿನ ಬುಟ್ಟಿಯನ್ನು ಕೂಗುತ್ತಿದ್ದು, 75 ಸಾವಿರ, ಒಂದು ವರೆ ಲಕ್ಷ ಹಾಗೂ ಕೊನೆಗೆ ಎರಡು ಲಕ್ಷಕ್ಕೆ ಹರಾಜಿನಲ್ಲಿ‌ ಪಡೆದುಕೊಂಡರು. ಹಣ್ಣಿನ ಬುಟ್ಟಿಯನ್ನು ರಘು ಆಚಾರ್ ಪತ್ನಿ ಆಶಾ ಹಾಗೂ ಪುತ್ರ ಹರ್ಷವರ್ಧನ್ ಸ್ವೀಕರಿಸಿದರು. ಈ ಸಮಯದಲ್ಲಿ ಬಿಜೆಪಿ ಹಿರಿಯ ಶಾಸಕ ಜಿ. ಹೆಚ್. ತಿಪ್ಪಾರೆಡ್ಡಿ, ಹಾಗೂ ಕೂಡಾದ ಮಾಜಿ ಅಧ್ಯಕ್ಷ ಬದರಿನಾಥ್ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *