ಶಿವಮೊಗ್ಗಾ ಲೋಕಸಭಾ ಕ್ಷೇತ್ರಕ್ಕೆ ತನ್ನ ಪುತ್ರನಿಗೆ ಟಿಕೆಟ್ ವಂಚಿತರಾಗಿರುವ ಹಿನ್ನೆಲೆಯಲ್ಲಿ ಕೆ ಎಸ್ ರೆಬಲ್ ಆಗಿದ್ದು, ನಾಳೆ ಶಿವಮೊಗ್ಗಾದಲ್ಲಿ ನಡೆಯಲಿರುವ ಮೋದಿ ಕಾರ್ಯಕ್ರಮಕ್ಕೆ ಗೈರಾಗುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಅವರು ಶಿವಮೊಗ್ಗಾದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದ್ದಾರೆ. ಬಿಎಸ್ ವೈ ಅವರು ಲಿಂಗಾಯಿತರು ಬೇಡ ಎಂದಿದ್ದರೆ ಒಕ್ಕಲಿಗರನ್ನು ಬೆಳೆಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ನನ್ನ ಮಗನಿಗೂ ಟಿಕೆಟ್ ತಪ್ಪಿಸಿದ್ದಾರೆ. ಇದರಿಂದ ನಾನು ಬಿಎಸ್ ವೈ ಪುತ್ರ ರಾಘವೇಂದ್ರ ವಿರುದ್ದ ಸ್ಪರ್ಧಿಸುತ್ತೇನೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಮತ್ತೆ ಮೋದಿ ಬಳಿ ಹೋಗುತ್ತೇನೆ. ಮೋದಿ ನನ್ನ ದೇವರು ಎಂದು ಹೇಳಿದ್ದಾರೆ.