ಚಿತ್ರದುರ್ಗದ ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು ರಾಘವೇಂದ್ರ ಸ್ವಾಮೀಗಳ 351 ನೇ ಪುಣ್ಯಾರಾಧನೆಯು ಭಕ್ತಿ ಭಾವಗಳಿಂದ ನಡೆಯಿತು.
ಬೆಂಗಿನಿಂದಲೂ ಕೂಡ ವಿವಿಧ ಪೂಜೆಯನ್ನು ಮಠದ ಆರ್ಚಕರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಅತ್ಯಂತ ಸಡಗರ ಸಂಭ್ರಮದಿಂದ ಹಾಗೂ ಭಕ್ತಿ ಭಾವಗಳಿಂದ ನಡೆಸಲಾಯಿತು.
ನಂತರ ನಡೆದ ರಾಘವೇಂದ್ರ ಸ್ವಾಮೀಗಳ ಪುಣ್ಯಾರಾಧನೆಯ ರಥೋತ್ಸವವು ಜರುಗಿತು. ಸ್ಥಳೀಯ ಹಾಗು ಹಿರಿಯ ಶಾಸಕರಾದ ಜಿ. ಹೆಚ್. ತಿಪ್ಪಾರೆಡ್ಡಿ ಅವರು ಕೂಡ ಭಾಗವಹಿಸಿ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು. ಶಾಸಕರಿಗೆ ಅರ್ಚಕರು ಶಾಲು ಹೊದಿಸಿ ಹಾರ. ಹಾಕಿ ಗೌರವಿಸಿದರು.ಈ ಸಮಯದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮತ್ತು ಇತರರು ಇದ್ದರು.