ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಒತ್ತಾಯಿಸಲಾಗುತ್ತದೆ: ಪ್ರಿಯಾಂಕ ಗಾಂಧಿ

ರಾಜಕೀಯ

ಹಿರಿಯೂರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆಗಮಿಸಿದ್ದು, ಕಾಡುಗೊಲ್ಲ ಸಮುದಾಯದ ಮಹಿಳೆಯರು ಆರತಿ ಮಾಡುವ ಮೂಲಕ ಹಿರಿಯೂರಿಗೆ ಬರಮಾಡಿಕೊಂಡರು. ಹಿರಿಯೂರು ತಾಲೂಕು ಕ್ರೀಡಾಂಗಣದಲ್ಲಿ ಕಾಡುಗೊಲ್ಲ ಸಮುದಾಯದ ಜೊತೆ ಸಂವಾದವನ್ನು ಆಯೋಜಿಸಿದ್ದು, ಸಂವಾದದಲ್ಲಿ ಕಾಡುಗೊಲ್ಲರ ಬೇಡಿಕೆ ಮತ್ತು ಅವರ ಸಮಸ್ಯೆಗಳನ್ನು ಹೇಳುವ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪಾಲ್ಗೊಂಡರು.

 

 

 


ಸಂವಾದದಲ್ಲಿ ಮಾತನಾಡಿದ ಮಾಜಿ ಎಂಎಲ್ ಸಿ ಜಯಮ್ಮ ಬಾಲರಾಜ್, ಕಾಡುಗೊಲ್ಲರನ್ನು ಎಸ್ಟಿ ಮೀಸಲಾತಿಗೆ ಸೇರಿಸ ಬೇಕೆಂದು‌ ಪ್ರಸ್ತಾವನೆ‌ ಸಲ್ಲಿಕೆಯಾಗಿದ್ದು, ಅದನ್ನು ತಾವುಗಳು ಮಾಡಿ ಕೊಡುವ ಮೂಲಕ ಅತ್ಯಂತ ಹಿಂದುಳಿದಿರುವ ಕಾಡುಗೊಲ್ಲರನ್ನು ಅಭಿವೃದ್ಧಿಯತ್ತ ಕರೆದೊಯ್ಯಬೇಕು ಎಂದು ಮನವಿ ಮಾಡಿದರು.
ಎ.ವಿ.ಉಮಾಪತಿ, ಕಾಡುಗೊಲ್ಲರು ಅರಣ್ಯಗಳಲ್ಲಿ ವಾಸವಿದ್ದು, ಶಿಕ್ಷಣದಿಂದ ಬಹಳ ಹಿಂದುಳಿದಿದ್ದೆವೆ, ರಾಜ ಕೀಯವಾಗಿಯೂ ಕೂಡ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ, ಇನ್ನೂ ಆರ್ಥಿಕ ವಾಗಿ ಅಭಿವೃದ್ಧಿ ಯಾಗುವುದು ದೂರದ ಮಾತಾಗಿದೆ. ನಮಗೆ ಎಸ್ಟಿ ಸೌಲಭ್ಯ ನೀಡಿದಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಕಾರಿಯಾಗಲಿದೆ ಎಂದರು. ಸ್ವಾತಂತ್ರ್ಯ ಪೂರ್ವದಿಂದ ಕಾಡುಗೊಲ್ಲರಿಗೆ ಬಹಳ ಅನ್ಯಾಯವಾಗಿದೆ. ಕಾಂಗ್ರೇಸ್ ಹಟ್ಟಿಗಳಿಗೆ ಸೌಲಭ್ಯ ಕಲ್ಪಿಸಿಕೊಡಬೇಕಿದೆ ಎಂದು ಮನವಿಯನ್ನು ಕಾಡುಗೊಲ್ಲ ಮುಖಂಡರು ಮನವಿ ಮಾಡಿದರು.ಸಮಸ್ಯೆಗಳು ಬೇಡಿಕೆಗಳನ್ನು ಆಲಿಸಿದ
ಪ್ರಿಯಾಂಕ ಗಾಂಧಿ, ನಿಮದು ಸ್ವಾಭಿಮಾನಿ ಸಮಾಜ, ಎಸ್ಟಿ ಸೌಲಭ್ಯ ಸಿಕ್ಕಿಲ್ಲದ್ದು ಬಹಳ ನೋವಿನ ಸಂಗತಿ. ನಿಮಗೆ ಎಸ್ಟಿ ಸೌಲಭ್ಯ ಸಿಗಬೇ ಕೆಂದು ಸಿದ್ದರಾಮಯ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು ಆಗಿಲ್ಲ. ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.
ರಾಜನೀತಿ ಬದಲಾಗ ಬೇಕು. ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಭರವಸೆ ನೀಡಿ, ನಂತರ ಸುಮ್ಮನಾಗವುದು ಸರಿ ಯಲ್ಲ. ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲು, ನಾವು ಪ್ರಯತ್ನ ಪಡುತ್ತೇವೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಮೊದಲು ಎಸ್ಟಿ ಸೇರಿಸುತ್ತೇವೆ. ನಿಮಗಾಗಿ ನಾವಿದ್ದೇವೆ, ಸರ್ಕಾರ ಬಂದಾಗ ನೀವು ಹೇಳಿದ ಹಾಗೆ ಮಾಡುತ್ತೇವೆ.
ಕಾಡುಗೊಲ್ಲರಿಗೆ ನೀಡುವ ಸೌಲಭ್ಯ ನೀಡಬೇಕು, ಪ್ರಾತಿನಿಧ್ಯ ನಿಮಗೆ ನೀಡಿಲ್ಲ. ಆದರೆ ಅದು ನಿಮ್ಮ ಹಕ್ಕು ಎಂಎಲ್ ಸಿ ಆಗಿರುವುದು. ನಿಮ್ಮ ಹಕ್ಕು‌ನಿಮಗೆ ಸಿಗಲೇ ಬೇಕು. ನೀವು ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಹೊಂದಬೇಕು. ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪಡೆಯುವ ಹಕ್ಕು ಕೂಡ ನಿಮ್ಮದು.
ಸಂವಾದಗಳು ನಡೆಯಬೇಕು. ಕಾರಣ ನಿಮ್ಮ ಸಮಸ್ಯೆಗಳನ್ನು ತಿಳಿಯಲು ಸಂವಾದಗಳು ಅವಶ್ಯಕ. ಇದರಿಂದ ನಿಮ್ಮ ಸಮಸ್ಯೆಗಳು ಬಗೆಹರಿಯಲು ಸಹಕಾರಿ ಆಗಲಿದೆ. ಡಿಕೆಶಿ, ಸಿದ್ದರಾಮಯ್ಯ ಹಾಗೂ ಸ್ಥಳೀಯ ನಾಯಕರುಗಳ ಜೊತೆ.ಚರ್ಚೆಗಳು ನಡೆಯುತ್ತಿದ್ದರೆ ಸಮಸ್ಯೆಗಳನ್ನು ಪರಿಹಾರ ಹುಡುಕಲು ಸಾಧ್ಯ,
ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಈ ಸಂವಾದ ನಮಗೆ ಅಗತ್ಯವಾಗಿದೆ.
ನೀವು ನನ್ನನ್ನು ಸ್ವಾಗತಿಸಿದ ರೀತಿ ಬಹಳ ಚೆನ್ನಾಗಿತ್ತು. ಸಂತೋಷ ತಂದಿದೆ. ನಿಮ್ಮ ಭಾಷೆ ನಮಗೆ ಅರ್ಥ ಆಗಿಲ್ಲ. ಆದರೂ ನಿಮ್ಮ ಭಾವನೆಗಳು ನಮಗೆ ಅರ್ಥವಾಗುತ್ತವೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾನು ನಿಮ್ಮ ಜೊತೆ ಸದಾ ಇರುತ್ತೆನೆ ಎಂದು ಹೇಳುವ ಮೂಲಕ ಭರವಸೆಯನ್ನು ನೀಡಿದರು. ಸಂವಾದ
ಇದಕ್ಕೂ ಮುನ್ನ ಕಾಡುಗೊಲ್ಲರಿಂದ ಪ್ರಿಯಾಂಕ ಗಾಂಧಿ ಅವರಿಗೆ ಕಂಬಳಿ ಹೊದಿಸಿ ಕುರಿ ಮರಿಯನ್ನು ಕೊಡುಗೆಯಾಗಿ ನೀಡಲಾಯಿತು.

Leave a Reply

Your email address will not be published. Required fields are marked *