ಡಿಎಂಎಫ್ ಹಣ ದುರುಪಯೋಗ : ನಿರ್ಮಿತಿ ಕೇಂದ್ರದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು

ಕ್ರೈಂ

ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನ ದುರುಪಯೋಗದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ನಿರ್ಮಿತಿ‌ ಕೇಂದ್ರದ ಯೋಜನಾ ನಿರ್ದೇಶಕ ಕೆಜಿ ಮೂಡಲಗಿರಿ ಯಪ್ಪ ಮತ್ತು ಇಂಜನಿಯರ್ ಸತೀ ಶ್ ಕಲ್ಲಟ್ಟಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆಗಳಲ್ಲಿ ಇಬ್ಬರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಾಗಿದೆ. ಆರ್ ಓ ಪ್ಲಾಂಟ್ ಕಾಮಗಾರಿಯ 1.5 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಇದರಲ್ಲಿ 97 ಲಕ್ಷ ಹಣದ ಕಾಮ ಗಾರಿಯಾಗಿದೆ ಎಂದು ವರದಿ ಯನ್ನು ನೀಡಿದ್ದು,ತನಿಖೆ ನಡೆಸಿ ದಾಗ ಹಣ ದುರುಪಯೋಗವಾಗಿದೆ ಎಂದು ತನಿಖಾ ತಂಡವು ವರದಿಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಡಿಸಿ ದಿವ್ಯಪ್ರಭು ವಜಾ ಮಾಡಿದ್ದರು. ಇಂದು ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

 

 

 

Leave a Reply

Your email address will not be published. Required fields are marked *