ರಘು ಚಂದನ್ ಗೆ ಟಿಕೆಟ್ ನೀಡುವಂತೆ ಅಭಿಮಾನಿಗಳಿಂದ ಪ್ರತಿಭಟನೆ

ರಾಜ್ಯ

 

 

 

 

ಬಿಜೆಪಿಯಿಂದ ಹೊಳಲ್ಕೆರೆ ಕ್ಷೇತ್ರದ ಎಂಎಲ್ ಎ ಚಂದ್ರಪ್ಪ ಪುತ್ರ ರಘುಚಂದನ್ ಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡುವಂತೆ ರಘು ಚಂದನ್ ಅಭಿಮಾನಿ‌ ಬಳಗದಿಂದ ಬೃಹತ್ ಪ್ರತಿಭಟನೆಯನ್ನು‌ ಚಿತ್ರದುರ್ಗದಲ್ಲಿ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಜಮಾಯಿಸಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಗೋಬ್ಯಾಕ್ ಕಾರಜೋಳ ಎಂಬ ಪ್ಲಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದರು‌.
ಗೋವಿಂದ ಕಾರಜೋಳ ವಿರುದ್ಧ ಗೋವಿಂದ ಗೋವಿಂದ ಕಾರಜೋಳ ಗೋವಿಂದ ಎಂಬ ಘೋಷಣೆ ಹಾಕಿದರು. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು. ಜಿಲ್ಲಾಧಿಕಾರಿ ವೃತ್ತದಿಂದ ಬಿಜೆಪಿ‌ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದು ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಜಿಲ್ಲಾಧ್ಯಕ್ಷ ಮುರುಳಿ ನಿಮ್ಮ ಬೇಡಿಕೆಯನ್ನು ವರಿಷ್ಠರಿಗೆ ತಲುಪಿಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *