ಬಿಎನ್ ಚಂದ್ರಪ್ಪ ಆರೋಗ್ಯಕ್ಕಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ
ಚಿತ್ರದುರ್ಗ,ನ07(ಸಂವಾ)- ಮಾಜಿ ಸಂಸದ ಹಾಗೂ ಕೆಪಿಸಿಸಿ ಮಾದ್ಯಮ ವಕ್ತಾರ ಬಿ.ಎನ್ ಚಂದ್ರ ಶೀಘ್ರ ಗುಣಮುಖರಾಗುವಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಬಿ.ಎನ್ ಚಂದ್ರಪ್ಪ, ಕಳೆದೆರಡು ದಿನಗಳ ಹಿಂದೆ ಕೋರೋನಾ ಸೋಂಕಿಗೆ ತಾನು ಒಳಗಾಗಿದ್ದು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆನೆ ನನ್ನ ಸಾಮೀಪ್ಯದಲ್ಲಿದ್ದವರು ಕೋರೋನಾ ಪರೀಕಗೆ ಒಳಗಾಗಬೇಕು ಎಂದು ಲಿಖಿತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಅವರ ಅಭಿಮಾನಿಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕಾಂಗ್ರೆಸ್ ಕಾರ್ಯಕರ್ತರು ನಗರದ ತೇರು ಮಲ್ಲೇಶ್ವರ ಸ್ವಾಮೀಗೆ ವಿಶೇಷ ಪೂಜೆ ಹಾಗೂ ನೇಕ್ ಬೇಬಿ ದರ್ಗಾ ಪ್ರಾರ್ಥನೆ ಸಲ್ಲಿಸಿ ಗುಣಮುಖರಾಗುವಂತೆ ಪ್ರಾರ್ಥಿಸಿದರು.
ಸಂಯುಕ್ತವಾಣಿ.
ಡಿ.ಕುಮಾರಸ್ವಾಮಿ