ಹಂಪಿ ಉತ್ಸವದಲ್ಲಿ ಕಲಾವಿದರ ವೇದಿಕೆ ನಿರ್ಮಾಣ ಮಾಡಿ
ಬಳ್ಳಾರಿ,ನ07( ಸಂವಾ)-ಹಂಪಿ ಉತ್ಸವದ ಕಲಾವಿದರಿಂದ ಉತ್ಸವದಲ್ಲಿ ವೇದಿಕೆ ನಿರ್ಮಾಣ ಮಾಡಿ ಕಾಟಾಚಾರದ ಉತ್ಸವವನ್ನು ಮಾಡುವುದು ಬೇಡ ಎಂದು ಪ್ರತಿಭಟನೆ ಮಾಡುವ ಮೂಲಕ ಒತ್ತಾಯಿಸಿದರು.
ನವೆಂಬರ್ 13 ರಂದು ಹಂಪಿ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದ ಬೆನ್ನಲ್ಲೇ ಕಲಾವಿದರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಮೂರು ದಿನ ಹಂಪಿ ಉತ್ಸವವನ್ನು ಆಚರಣೆ ಮಾಡಲಾಗುತ್ತಿತ್ತು. ಆದ್ರೇ ಕೊರೋನಾ ಹಿನ್ನೆಲೆ ಈ ಬಾರಿ ಸರ್ಕಾರ ಕೇವಲ ಒಂದು ದಿನ ಉತ್ಸವ ಮಾಡಲು ನಿರ್ಧಾರ ಮಾಡಿದ್ದು, ಇದರಲ್ಲಿ ಯಾವುದೇ ವೇದಿಕೆ ಇಲ್ಲದೇ ಕೇವಲ ಮೆರವಣಿಗೆ ಮತ್ತು ತುಂಗಾರತಿ ಕಾರ್ಯಕ್ರಮವಿರಲಿದೆ. ಆದ್ರೇ, ಹಂಪಿ ಉತ್ಸವವೆಂದ್ರೇ ಕಲಾವಿದರ ಉತ್ಸವ ಒಂದು ವೇದಿಕೆ ಇಲ್ಲದೆ ಕಲಾವಿದರಿಗೆ ಅವಕಾಶವಿಲ್ಲದೇ ಮಾಡೋ ಉತ್ಸವದಿಂದ ಯಾವುದೇ ಲಾಭವಿಲ್ಲ ಹೀಗಾಗಿ ಒಂದಾದ್ರೂ ವೇದಿಕೆ ನಿರ್ಮಾಣ ಮಾಡಿ ಎಂದು ಒತ್ತಾಯಿಸಿದ್ದಾರೆ.
ಸಂಯುಕ್ತವಾಣಿ