ಕೋಟೆ ನಾಡಿನಲ್ಲಿ‌ ಭೀಕರ ಅಪಘಾತ 3 ಸಾವು 5 ಜನರಿಗೆ ಗಂಭೀರ ಗಾಯ

ರಾಜ್ಯ

ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿಯಾಗಿ ಪರಿಣಾಮ ಮೂರು ತಿಂಗಳ ಕಂದಮ್ಮ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ವಿಜಾಪುರ ಗೊಲ್ಲರಹಟ್ಟಿ ಬಳಿ‌ ಘಟನೆಯು ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ಅತೀ ವೇಗದಿಂದ ಬಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮೂವರು ಮೃತಪಟ್ಟಿ ದ್ದಾರೆ. ಮೃತರನ್ನು ಜಾಕೀರ್ ಆಹಮದ್,( 60) ತಬಸಮ್, (28)ಮತ್ತು ಹಯತ್ ಫಾತೀಮಾ (03) ಎಂದು ಗುರುತಿಸಲಾಗಿದೆ. ಗಾಯಗೊಂಡ ನಾಜೀಯಾ (22), ಇಮ್ರಾನ್ ಖಾನ್ (32) ಶೋಯೆಬ್ ಆಹಮದ್( 30) ತಬ್ರೇಜ್ ಆಹಮದ್ (27) ಮತ್ತು ಸಬಾ (26) ಎಂದು ಗುರುತಿಸಿದ್ದು, ಐದು ಜನರು ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಕೂಡ ಗೋವಾದಿಂದ ಬೆಂಗಳೂ ರಿಗೆ ಪ್ರಯಾಣ ಮಾಡುತ್ತಿದ್ದರು. ಎಂದು‌ ತಿಳಿದು‌ ಬಂದಿದೆ. ಭರ ಮಸಾಗರ ಪೊಲೀಸರು ಪರಿ ಶೀಲ ನೆ ನಡೆಸುತ್ತಿದ್ದಾರೆ.

 

 

 

Leave a Reply

Your email address will not be published. Required fields are marked *