ಚಿತ್ರದುರ್ಗ, ನ 01(ಸಂವಾ)- ಇಂದು ಹೋರಾಟ ಮಾಡುವ ದಿನವಲ್ಲ, ಆಚರಣೆ ಮಾಡುವ ದಿನ ಆದ್ದರಿಂದ ಕಲ್ಯಾಣ ಕರ್ನಾಟಕದ ಜನರು ಹೋರಾಟವನ್ನು ಬಿಡಬೇಕು. ಬೇಡಿಕೆಗಳ ಬಗ್ಗೆ ಸರ್ಕಾರದ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ಕಲಬುರ್ಗಿಯು ಪ್ರತ್ಯೇಕ ರಾಜ್ಯವಾಗಬೇಕು ಎಂದು ಅಲ್ಲಿನ ಹೋರಾಟಗಾರರ ಅಭಿಪ್ರಾಯವಾಗಿದೆ. ನಮ್ಮ ಸರ್ಕಾರ 3 ಸಾವಿರ ಕೋಟಿ ಹಣವನ್ನು ಅಭಿವೃದ್ದಿಗಾಗಿ ಮಂಜೂರು ಮಾಡಿದೆ. ಹೈದ್ರಾಬಾದ್ ಕನಾಟಕವನ್ನು ಕಲ್ಯಾಣ ಕರ್ನಾಟಕವನ್ನಾಗಿ ನಾಮಕರಣ ಮಾಡಿ ಅದರ ಅಭಿವೃದ್ದಿಗಾಗಿ ಜಯದೇವ ಆಸ್ಪತ್ರೆ ಏಮ್ಸ್ ಆಸ್ಪತ್ರೆಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದೆ. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಬದ್ದವಾಗಿದೆ. ಆದ್ದರಿಂದ ಹೋರಟಗಾರರು ಹೋರಾಟವನ್ನು ಕೈ ಬಿಟ್ಟು ಸರ್ಕಾರದ ಜೊತೆಗೆ ಮಾತು ಕತೆ ಮಾಡಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ