ಚಿತ್ರದುರ್ಗ:ನಾನು ಭ್ರಷ್ಟನಲ್ಲ ಸ್ವಜನ ಪಕ್ಷಿಯಲ್ಲ ಹಾಗೂ ಲಂಚಕೋರನಲ್ಲ ನಾನು ಮಾಡಿರೋ ಕೆಲಸಗಳು ಹೇಳುತ್ತವೆ. ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹೇಳಿದರು.
ಅವರು ಚಿತ್ರದುರ್ಗ ದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಚಂದ್ರಪ್ಪ ಏನೆಂದು ಜನ ಹೇಳುತ್ತಾರೆ ಮಾಜಿ ಮನಿಸ್ಟರ್ ಏನು ಎಂದು ನೀವು ಹೇಳುತ್ತಿರಿ ಅದನ್ನು ನಾನೇಕೆ ಹೇಳಲಿ, ನಾನು ಮಾತನಾಡುವುದಿಲ್ಲ ನನ್ನ ಕೆಲಸಗಳು ಮಾತನಾಡುತ್ತವೆ. ನನಗೆ ಒಂದು ಲಕ್ಷದ ಎಂಟು ಸಾವಿರ ಜನರುಮತ ಹಾಕಿದ್ದಾರೆ. ಅಷ್ಟೂ ಜನರು ನನ್ನ ಪ್ರೀತಿ ಮಾಡುತ್ತಾರೆ. ನನ್ನ ನಡವಳಿಕೆ ಗಮನಿಸುತ್ತಾರೆ.ನಾನು ಸ್ವಜನಪಕ್ಷಪಾತಿನೋ ಭ್ರಷ್ಟನೋ ಲಂಚಕೋರನೋ ಎಂದು ಅವರೇ ಹೇಳುತ್ತಾರೆ ನಾನೇಕೆ ಹೇಳಬೇಕು. ಮುಳ್ಳನ್ನ ಕಟ್ಟಲು ಬರುವುದಿಲ್ಲ ಒಂದಲ್ಲಾ ಒಂದು ಕಡೆಯಿಂದ ಹೊರಗೆ ಬರುತ್ತದೆ ಅದು ಮುಂದೆ ಗೊತ್ತಾಗುತ್ತದೆ. ಆಸ್ಪತ್ರೆ ಗೆ ಆಂಜನೇಯ ಹಾಗೂ ನಾನು ದುಡ್ಡು ತಂದು ಕಟ್ಟಿಸಿದ್ದೇವೆ. 50 ಕೋಟಿ ಹಣ ತಂದು ಕಟ್ಟಿಸಿ ಆಸ್ಪತ್ರೆ ಉದ್ಘಾಟನೆ ಮಾಡಬೇಡ ಜನರು ಬದುಕೋದು ಬೇಡ ಎಂದು ನಾನು ಹೇಳುತ್ತೀನಾ ಎಂದು ಪರೋಕ್ಷವಾಗಿ ಮಾಜಿ ಸಚಿವ ಆಂಜನೇಯ ಅವರನ್ನು ಗುರಿಯಾಗಿಸಿಕೊಂಡು ಆಕ್ರೋಶ ಹೊರಗೆ ಹಾಕಿದರು.
ಸಂಯುಕ್ತವಾಣಿ