ಚಿತ್ರದುರ್ಗ ನಗರ ಪೋಲಿಸ್ ಕಾನ್ಸಟೇಬಲ್ ಒಬ್ಬ ಹಣ ದ್ವಿಗುಣ ಪ್ರಕರಣದಲ್ಲಿ ಭಾಗಿಯಾಗುರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಎಸ್ಪಿ ರಾಧಿಕಾ ಹೇಳಿದ್ದಾರೆ.
ಜೆಡಿಎಸ್ ನ ನಗರಸಭಾ ಸದಸ್ಯ ಚಂದ್ರಶೇಖರ್ ಹಾಗು 9 ಜನರು ಸೇರಿ ಸಾರ್ವಜನಿಕರಿಗೆ ಹಣ ದ್ವಿಗುಣದ ಹೆಸರಿನಲ್ಲಿ ವಂಚಿಸುತ್ತಿದ್ದರು, ಇವರನ್ನು ಪೋಲಿಸರು ಬಂಧಿಸಿದ್ದಾರೆ.
ಆದರೆ ಪೋಲಿಸ್ ಕಾನ್ಸ್ಟೇಬಲ್ ಇಮಾಮ್ ಹುಸೇನ್ ನಾಪತ್ತೆಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಸಿದಂತೆ ಇವರುಗಳನ್ನು ವಿಚಾರಣೆ ನಡೆಸುತ್ತಿದ್ದ ಸಮಯದಲ್ಲಿ ಇಮಾಮ್ ಹುಸೇನ್ ಎಂಬ ಪೋಲಿಸ್ ಕಾನ್ಸ್ಟೇಬಲ್ ಭಾಗಿಯಾಗಿರುವುದು ತಿಳಿದು ಬಂದಿದೆ. ಇಮಾಮ್ ಹುಸೇನ್ ಹಿಂದೆ ಅಕ್ರಮವಾಗಿ ಕಬ್ಬಣದ ಅದಿರು ಸಾಗಿಸುವ ಪ್ರಕರಣದಲ್ಲಿಯೂ ಭಾಗಿಯಾಗಿದ್ದು, ಈಗ ಹಣ ದ್ವಿಗುಣ ಪ್ರಕರಣದಲ್ಲಿ ಪಾಲುದಾರನಾಗಿದ್ದಾನೆ ಎಂದು ತಿಳಿದು ಬಂದಿದ್ದು, ಇಮಾಮ್ ಹುಸೇನ್ ನಾಪತ್ತೆಯಾಗಿದ್ದಾನೆ ಎಂದು ಎಸ್ಪಿ ರಾಧಿಕಾ ತಿಳಿಸಿದ್ದಾರೆ