ಕೊಲೆ ಆರೋಪಿ 24 ,ಗಂಟೆಗಳಲ್ಲಿ ಬಂಧನ

ಕ್ರೈಂ

ಚಿತ್ರದುರ್ಗ,:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಮ್ಮನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಅಣ್ಣನನ್ನು ಹಿರಿಯೂರು ನಗರ ಠಾಣೆ ಪೋಲಿಸರು 24 ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Chitradurga murder arrest

 

 

 

ಕಳೆದ ಎರಡು ದಿನಗಳ ಹಿಂದೆ ಹಿರಿಯೂರು ತಾಲೂಕಿನ ಕೆಎಂ ಕೊಟ್ಟಿಗೆ ನಿವಾಸಿ ಶಿವು ಎಂಬುವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಯನ್ನು ಮಾಡಲಾಗಿತ್ತು. ಇದರ ಬೆನ್ನು ಬಿದ್ದ ಹಿರಿಯೂರು ನಗರ ಠಾಣೆ ಪೋಲಿಸರು, ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಸಿದ್ದಾರೆ. ಇದರಿಂದ ಸ್ವತಃ ಅಣ್ಣನೇ ತಮ್ಮನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಶಿವು ದಿನವೂ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ, ಕುಡಿಯುವುದಕ್ಕಾಗಿ ಮನೆಯಲ್ಲಿದ್ದ ಸಾಮಾನುಗಳನ್ನು ಅಡಮಾನ ಇಡುತ್ತಿದ್ದ ಇದರಿಂದ ಇಬ್ಬರ ನಡುವೆ ಜಗಳ ಆಗಾಗ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ರವಿ ತಮ್ಮ ಶಿವುನನ್ನು ಹಿರಿಯೂರು ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಿಆರ್ ಸಿ ಕಚೇರಿ ಹಿಂಭಾಗದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ನಾಪತ್ತೆಯಾಗಿದ್ದ ಇದರ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹಿರಿಯೂರು ನಗರ ಪೋಲಿಸ್ ಠಾಣೆ ಪೋಲಿಸರು ಹೊಳಲ್ಕೆರೆ ತಾಲೂಕಿನ ಕೋಡಿಗೆ ಹಳ್ಳಿಯಲ್ಲಿ‌ ಬಂಧಿಸಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *