ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಗಡಿ ಪ್ರದೇಶದ ತಮ್ಮೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊನಾಪುರ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ 430 ಜನ ಕೂಲಿಕಾರರ ಸಮ್ಮುಖದಲ್ಲಿ “ನರೇಗಾ ದಿವಸ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ. ಎಸ್.ದಿವಾಕರ್ ನರೇಗಾ ಕೂಲಿ ಕಾರ್ಮಿಕರ ಜೊತೆ ಸಂವಾದ ನಡೆಸಿ ಅವರಿಗೆ ನರೇಗಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ 100 ಮಾನವದಿನಗಳು ಪೂರೈಸಿದ ಕೂಲಿಕಾರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ನರೇಗಾ ಕೂಲಿಕಾರರಿಗೆ ಅರೋಗ್ಯ ತಪಾಸಣೆ ಮಾಡಿಸಲಾಯಿತು ಈ ಕಾರ್ಯಕ್ರಮದಲ್ಲಿ ರಾಜ್ಯ ಕಚೇರಿಯ ಜಂಟಿ ನಿರ್ದೇಶಕರಾದ, ಶ್ರೀಮತಿ ರಶ್ಮಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಜಗದೀಶ್, ಪ್ರಾಜೆಕ್ಟ್ ಇಂಜಿನಿಯರ್ ,ಶ್ರೀಮತಿ ಸ್ವಪ್ನ , ಶ್ರೀ ಅಭಿರಾಮ್, ಜಿಲ್ಲಾ ಪಂಚಾಯತ್ ನ ಎ ಡಿ ಪಿ ಸಿ ಮೋಹನ್, ಜಿಲ್ಲಾ ಐ ಇ ಸಿ ಸೋಯೋಜಕರಾದ ಶ್ರೀ ರವೀಂದ್ರನಾಥ್ ಹಾಗೂ ಮೊಳಕಾಲ್ಮೂರು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಾನಕಿರಾಮ್ ರವರು ಭಾಗವಹಿಸಿದ್ದರು.