ಕೆಎಸ್ ಆರ್ ಟಿಸಿ ಬಸ್ ಕ್ರೂಸರ್ ಮುಖಾಮುಖಿ ಡಿಕ್ಕಿ 5 ಜನ ಸಾವು

ಕ್ರೈಂ

ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಜವರಾಯ ksrtc ಬಸ್ ರೂಪದಲ್ಲಿ ಬಂದು 5 ಜನರನ್ನು ಬಲಿ ಪಡೆದಿರುವ ಘಟನೆ ಬಿಜಿ ಕೆರೆ ಸಮೀಪ ನಡೆದಿದೆ.

Chitradurga ksrtc bus crusier accident 5 death
ಚಿತ್ರದುರ್ಗ ಜಿಲ್ಲೆ ಮೊಳಲ್ಮೂರು ತಾಲೂಕಿನ ಬಿಜಿಕೆರೆ ಸಮೀಪದಲ್ಲಿ ಬೆಳಗಿನ ಜಾವ ksrtc ಬಸ್ ಚಾಲಕನ ನಿರ್ಲಕ್ಷತನದಿಂದಾಗಿ ಕ್ರೂಸ್ ಹಾಗೂ ಬಸ್ ಮುಖಾ ಮುಖಿ ಡಿಕ್ಕಿಯಾಗಿವೆ. ಈ ಘಟ‌ನೆಯಿಂದಾಗಿ ಕ್ರೂಸರ್ ನಲ್ಲಿದ್ದ ಮಹಿಳೆ ಸೇರಿ ಐವರು ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.

 

 

 

Chitradurga ksrtc bus crusier accident 5 death

ಮೃತರನ್ನು ರಾಯಚೂರು ಜಿಲ್ಲೆಯ ದೆವದುರ್ಗ ತಾಲೂಕಿನ ಹುಣಸೂರು ಗ್ರಾಮದ ತಿಮ್ಮಣ್ಣ(40) ಪತ್ನಿ ರತ್ನಮ್ಮ(38) ಸೋಮನಮರಡಿ ಗ್ರಾಮದ ದುರುಗಪ್ಪ(16)ಮತ್ತು ಗಜಲಿ ಗ್ರಾಮದ ಮಹೇಶ (19) ಹಾಗು 55 ವರ್ಷದ ಓರ್ವ ವ್ಯಕ್ತಿ ಎಂದು ತಿಳಿದು ಬಂದಿದೆ. ಇವರೆಲ್ಲರೂ ಕೂಡ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೊಗುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ
ಚಳ್ಳಕೆರೆ ಹಾಗೂ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಜಿ. ರಾಧಿಕಾ ಹಾಗೂ ಪಿಎಸೈ ಬಸವರಾಜ್ ಭೇಟಿ‌ ನೀಡಿ ಪರಿಶೀಲಿಸಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *