ಚಿಕ್ಕಮಗಳೂರು: ಸದ್ದು ಗದ್ದಲವಿಲ್ಲದಿದ್ದರೆ ಜಾತ್ರೆ ಆಗೋದಿಲ್ಲ ಅದ್ದರಿಂದ ಈಗ ಎದ್ದಿರುವ ವಿಚಾರಗಳ ಬಗ್ಗೆ ಚರ್ಚೆ ಆಗಬೇಕು ಎಂದು ಸಿಟಿ ರವಿ ಹೇಳಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಮುಖಂಡ ಬಸನಗೌಡ ಯತ್ನಾಳ್ ಅವರು ಸಂಕ್ರಮಣದಲ್ಲಿ ಎಲ್ಲವೂ ಬದಲಾಗುತ್ತದೆ. ಉತ್ತರಾಯಣದಲ್ಲಿ ಉತ್ತರ ಕರ್ನಾಟಕಕ್ಕೆ ಭವಿಷ್ಯವಿದೆ. ಸಂಪುಟ ವಿಸ್ತರಣೆಯಾಗುತ್ತದೆಯೋ? ಇಲ್ಲವೇ ಮತ್ತಿನ್ನೇನೋ ಆಗುತಗತದೆಯೊ ಎಂದು ಹೇಳಿದ್ದರು.
ಆದಕ್ಕೆ ಪುಷ್ಠಿ ಕೊಡುವಂತೆ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಚಿಕ್ಕಮಗಳೂರಿನಲ್ಲಿ ಎಲ್ಲವನ್ನೂ ನಾನು ಹೇಳಲು ಹೋಗೊದಿಲ್ಲ. ಆದರೆ ಸದ್ದುಗದ್ದಲವಿಲ್ಲದಿದ್ದರೆ ಅದು ಜಾತ್ರೆಯಾಗುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ ಎಂದು ಹೇಳಿದ್ದು ಭಾರಿ ಕುತೂಹಲವನ್ನು ಮೂಢಿಸಿದೆ.
ಸಂಯುಕ್ತವಾಣಿ