ಚಿತ್ರದುರ್ಗ: ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅನಾಹುತವಾದರೆ ಜನರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ ಇದಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ವೈದ್ಯರುಗಳಿಗೆ ಸಂಸದ ನಾರಾಯಣ ಸ್ವಾಮಿ ಸೂಚನೆ ನೀಡಿದರು.
ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಆರು ತಾಲೂಕುಗಳಲ್ಲಿ ಆರು ಜನ ಮಕ್ಕಳ ವೈದ್ಯರು ಇದ್ದಾರೆ. ಆದರೆ ಇನ್ನು 30 ಜನ ವೈದ್ಯರು ಬೇಕು. ಆದರೆ ಯಾರೂ ಸಿಗುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ನಮಗೆ ಸಮಸ್ಯೆ ಆಗುತ್ತದೆ. ಆದ್ದರಿಂದ ಕೂಡಲೇ ವೈದ್ಯರನ್ನು ಕಾಲ್ ಮಾಡಿ ತುಂಬಿಕೊಳ್ಳುವ ಕೆಲಸವನ್ನ ಮಾಡಬೇಕು. ಇಲ್ಲದೆ ಹೋದರೆ ಮೂರನೇ ಅಲೆ ಆರಂಭವಾದರೆ ಆಗ ನಮಗೆ ಸಮಸ್ಯೆ ಉಂಟಾಗುತ್ತದೆ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.
ಸಂಯುಕ್ತವಾಣಿ