ಚಿತ್ರದುರ್ಗ,: ಕೋರೋನಾಕ್ಕೆ ಹೆದರಿ ಗ್ರಾಮದ 14 ದಿಕ್ಕಿಗೆ ಮಂತ್ರಿಸಿದ ತೆಂಗಿನ ಕಾಯಿಯನ್ನು ಕಟ್ಟಿದ ಘಟನೆ ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಕ್ಷೇತ್ರದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮನ್ನೆಕೋಟೆ ಗ್ರಾಮದಲ್ಲಿ ಕೇವಲ ಒಂದು ತಿಂಗಳಲ್ಲಿ ಕೋವಿಡ್ ನ ನಾಲ್ಕು ಸಾವು ಸೇರಿದಂತೆ ಒಟ್ಟು 15 ಜನರು ಸಾವನ್ನಪ್ಪಿದ್ದಾರೆ. ನಾಲ್ಕು ಜನರು ಕೋವಿಡ್ ಗೆ ಬಲಿಯಾಗಿದ್ದರೆ, ಉಳಿದ 11 ಜನರು ಇನ್ನಿತರೇ ರೋಗಗಳಿಗೆ ಬಲಿಯಾಗಿದ್ದಾರೆ.ಎರಡು ಸಾವಿರ ಜನಸಂಖ್ಯೆಯುಳ್ಳ ಅತೀ ದೊಡ್ಡ ಗ್ರಾಮವಾಗಿರುವ ಮನ್ನೆಕೋಟೆಯಲ್ಲಿ 450 ಕ್ಕೂ ಹೆಚ್ಚು ಜನರಿಗೆ ಶೀತ ಕೆಮ್ಮು ನೆಗಡಿ ಜ್ವರ ಕಾಣಿಸಿಕೊಂಡಿದೆ. ಇಷ್ಟೆಲ್ಲಾ ನಡೆದರೂ ಸೌಜನ್ಯಕ್ಕೂ ಜನಪ್ರತಿನಿಧಿಗಳು ಆರೋಗ್ಯ ಇಲಾಖಾಧಿಕಾರಿಗಳು ಭೇಟಿ ನೀಡಿಲ್ಲ. ಇದರಿಂದ ಭೀತಿಗೊಳಗಾದ ಗ್ರಾಮಸ್ಥರು 14 ದಿಕ್ಕುಗಳಿಗೂ ತೆಂಗಿನಕಾಯಿ ಕಟ್ಟಿ ಮೂಢನಂಬಿಕೆಯನ್ನು ಪ್ರದರ್ಶಿಸಿದ್ದಾರೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಮೂಢನಂಬಿಕೆಗೆ ಮೊರೆ ಹೋಗಿರುವ ಗ್ರಾಮಸ್ಥರಿಂದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿದ್ದಾರೆ.
ಸಂಯುಕ್ತವಾಣಿ