ಚಿತ್ರದುರ್ಗದ ತುರುವನೂರು ರಸ್ತೆಯಲ್ಲಿರುವ ಪ್ರಸನ್ನ ವೆಂಕಟರಮಣಸ್ವಾಮಿಯ ಅಂಬಿನೋತ್ಸವ ಇಂದು ನಡೆದಿದ್ದು, ಅಂಬನ್ನು ಕತ್ತರಿಸುವ ಮೂಲಕ ಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ ಅವರು ಚಾಲನೆ ನೀಡಿದರು.
ಸಡಗರ ಸಂಭ್ರಮದಿಂದ ಪ್ರತೀ ವರ್ಷದಂತೆ ಈ ಬಾರಿಯು ಅಂಬಿನೋತ್ಸವ ನಡೆಯಿತು. ಕಳೆದ 26 ರಿಂದ ನಡೆದ ನವರಾತ್ರಿಯಲ್ಲಿ 9 ದಿನಗಳು ಕೂಡ ಸ್ವಾಮಿಗೆ ವಿವಿಧ ಬಗೆಯ ಅಲಂಕಾರಗಳು ದೇವಸ್ಥಾನಕ್ಕೆ ವಿದ್ಯುತ್ ದೀಪದ ಅಲಂಕಾರಗಳನ್ನು ಮಾಡಲಾಗಿತ್ತು. ಇದರಲ್ಲಿ 4 ಮತ್ತು 5 ರಂದು ವಿಶೇಷ ಅಲಂಕಾರವನ್ನು ವೆಂಕಟರಮಣಸ್ವಾಮಿ ಹಾಗೂ ದೇವಸ್ಥಾನಕ್ಕೆ ಮಾಡಿದ್ದು ಜನರ ಹಾಗೂ ಭಕ್ತರ ಮನ ಸೆಳೆಯಿತು. ಅಂಬಿನೋತ್ಸವವೂ ಇಂದು ನಡೆದಿದ್ದು, ನಾಳೆ ಕಂಕಣ ವಿಸರ್ಜನೆಯ ಮೂಲಕ ನವರಾತ್ರಿಯ ಪೂಜೆಗೆ ತೆರೆ ಬೀಳಲಿದೆ. ಇಂದು ನಡೆದ ಅಂಬಿನೋತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು, ಅಂಬಿನೋಸ್ತವವನ್ನು ಕಣ್ತುಂಬಿಕೊಂಡು ಭಕ್ತರು ಪುನೀತರಾದರು