ಮಾಲೆ ಹಾಕಿ ಕುಡಿದಿದ್ದು ತಪ್ಪೆಂದು ತಿಳಿದ ಯುವಕ‌ ಮಾಡಿದ್ದೇನು ?

ಜಿಲ್ಲಾ ಸುದ್ದಿ

ಪಾಂಡು ರಂಗ ಮಾಲೆ ಧರಿಸಿ ಕುಡಿದು ಬಂದ ಮಗನನ್ನು ಬೈದಿದಕ್ಕೆ ಕುತ್ತಿಗೆಗೆ ಬ್ಲೇಡ್ ನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗದಲ್ಲಿ‌ ನಡೆದಿದೆ.
ಕಾಮನಬಾವಿ ಬಡಾವಣೆಯ ಧನು ಎಂಬ ಯುವನೊಬ್ಬ ಪಾಂಡು ರಂಗ ಮಾಲೆಯನ್ನು ಧರಿಸಿದ್ದು, ಮದ್ಯಪಾನ ಮಾಡಲು ಮಾಲೆಯನ್ನು ಬಿಚ್ಚಿಟ್ಟು ಮದ್ಯಪಾನ ಮಾಡಿಕೊಂಡು ಬಂದಿದ್ದಾನೆ. ಇದನ್ನು ನೋಡಿದ ಧನು ತಾಯಿ ಅವನಿಗೆ ಬೈದಿದ್ದಾಳೆ. ಇದರಿಂದ ಬೇಸರಗೊಂಡ ಯುವಕ ನಾನು ಮಾಲೆ ಧರಿಸಿದ್ದು, ಅದನ್ನು ಬಿಚ್ಚಿಟ್ಟು ಮದ್ಯಪಾನ ಮಾಡಬಾರದಿತ್ತು. ನಾನು ಮಾಡಿದ್ದು ತಪ್ಪಾಗಿದೆ. ಎಂದು ಅಂದುಕೊಂಡ ಆ ಯುವಕ ತಾನೊಂದು ಬ್ಲೇಡ್ ತೆಗೆದುಕೊಂಡು ಕುತ್ತಿಗೆಯ ಎರಡೂ ಭಾಗಕ್ಕೆ ಕೊಯ್ದುಕೊಂಡಿದ್ದಾನೆ. ನಂತರ ಅವನ ತಾಯಿ ಹಾಗೂ ನೆರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದುಕೊಂಡು ಬಂದ ಧನು ನೋವು ಹೆಚ್ಚಾಗಿದ್ದು, ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾ‌ನೆ.ನಾನು ನನ್ನ ನನ್ನಷ್ಟಕ್ಕೆ ನಾನೇ ಬ್ಲೇಡ್ ಹಾಕಿಕೊಂಡಿದ್ದೇನೆ ಎಂದು‌ ನಗರಠಾಣೆ ಪೋಲಿಸರಿಗೆ ಹೇಳಿಕೆ ನೀಡಿದ್ದು, ಆತ್ಮಹತ್ಯೆಗೆ ಯತ್ನಿಸಿದ ಕಾರಣ ನಗರ ಠಾಣೆಯಲ್ಲಿ ಯುವಕನ ಮೇಲೆ ಪ್ರಕರಣ ದಾಖಲಾಗಿದೆ

 

 

 

Leave a Reply

Your email address will not be published. Required fields are marked *