ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಹಾನಿಯಾಗಿರುವ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಓಬವ್ವ ನಾಗ್ತಿಹಳ್ಳಿಮತ್ತು ದೊಡ್ಡಾಲಘಟ್ಟ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಮಯದಲ್ಲಿ ರೈತ ರಂಗಪ್ಪ ಮೆಕ್ಕೆ ಜೋಳ ಬಿತ್ತನೆ ಮಾಡಿದಾಗಿನಿಂದಲೂ ಕೂಡ ನಿರಂತರವಾಗಿ ಮಳೆ ಸುರಿಯುತ್ತಿದೆ.ಇದರಿಂದ ಬೆಳೆಯು ಕೈ ಕೊಟ್ಟಿದೆ ಎಂದು ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಸಚಿವ ಅಶೋಕ್ ಅಧಿಕಾರಿಗಳಿಂದಲೂ ಮಾಹಿತಿ ಪಡೆದು ಇನ್ನು ಹದಿನೈದು ದಿನಗಳೊಳಗಾಗಿ ಪರಿಹಾರವನ್ನು ಕೊಡುವುದಾಗಿ ರೈತರಿಗೆ ಹೇಳಿದರು.
ಸಚಿವರಿಗೆ ಡಿಸಿ ಕವಿತಾ ಮನ್ನೀಕೇರಿ ಮತ್ತು ಜೆ ಡಿ ರಮೇಶ್ ಇನ್ನಿತರರು ಇದ್ದರು