ಕಾಂಗ್ರೆಸ್ ನುಗ್ಗೆ ಮರ ಬಿಜೆಪಿ ಆಲದ ಮರ

ಜಿಲ್ಲಾ ಸುದ್ದಿ

ಬಿಜೆಪಿ ಮರ ಗಟ್ಟಿ ಮರ ಕಾಂಗ್ರೆಸ್ ನುಗ್ಗೆ ಮರ ಅದನ್ನು ಹತ್ತಿದರೆ ಮುರಿದು ಹೋಗುತ್ತದೆ ಎಂದು ಕಂದಾಯ ಸಚಿವ ಆರ್ . ಆಶೋಕ್ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಟಾಂಗ್ ನೀಡಿದರು.
ಅವರು ಮೊಳಕಾಲ್ಮೂರಿನಲ್ಲಿ ನೂತನ ತಾಲೂಕು ಆಡಳಿತ ಸೌಧವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮದು ಆಲದ ಮರ ನುಗ್ಗೆ ಮರ ಹತ್ತಿದರೆ ಮುರಿದು ಹೋಗುತ್ತದೆ, ಆಲದ ಮರ ಹತ್ತಿದರೆ ಗಟ್ಟಿ ಇರುತ್ತದೆ. ಪಿಎಂ ಮೋದಿ, ಸಿಎಂ ಯಡಿಯೂರಪ್ಪ ಎಂದು ಬಾಯ್ತಪ್ಪಿ ಹೇಳಿದ ಆಶೋಕ್ ಸಾವರಿಸಿಕೊಂಡು ಬೊಮ್ಮಾಯಿ ಹೆಸರೇಳುತ್ತಾ ಇವರಿರುವರೆಗೂ ಯಾರೂ ಏನೂ ಮಾಡೋಕೆ ಆಗಲ್ಲ ಎಂದರು.

 

 

 

ಇದಕ್ಕೂ‌ಮೊದಲು ಮಾತ‌ನಾಡಿದ ಸಾರಿಗೆ ಸಚಿವ ಶ್ರೀರಾಮುಲು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಹಿಟ್ ವಿಕೆಟ್ ಆಗ್ತಾರೆ, ಸೋಲಿನ ಹತಾಷೆಯಿಂದ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ‌್ನು ಡಿಕೆಶಿ ಸೋಲಿಸುತ್ತಾರೆ. 2018 ರಲ್ಲಿ ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಸೋಲಿಸಿದ ಹಾಗೆ, ಮುಂದಿನ ಚುನಾವಣೆಯಲ್ಲಿ ಮೋದಿ ಸಿಎಂ ಬೊಮ್ಮಾಯಿ ಆಶೀರ್ವಾದದಿಂದ 150 ಸ್ಥಾನಗಳನ್ನು ಗೆಲ್ಲುತ್ತೇವೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕೂಡ ಕಾಂಗ್ರೆಸ್ ಗೆ ಭವಿಷ್ಯವಿಲ್ಲ ಎಂದರು.

Leave a Reply

Your email address will not be published. Required fields are marked *