ಚಳ್ಳಕೆರೆ ತಾಲೂಕಿನ ಮಲ್ಲೂರಹಟ್ಟಿ ಗ್ರಾಮದಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರುಗಾಹಿಗೆ ಸಿಡಿಲು ಬಡಿದು ಮೃತ ಪಟ್ಟ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ತಹಸೀಲ್ದಾರ್ ಹಾಗೂ ದಂಡಾಧಿಕಾರಿ ಎನ್ ರಘುಮೂರ್ತಿಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿ ಮೃತ ಶವವನ್ನು ನಾಯಕನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದರು.
ನಂತರ ಪರೀಕ್ಷೆಯನ್ನು ಮಾಡಿಸಿ ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು.ಇದೇ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಳೆಯ ತೀವ್ರತೆ ಜಾಸ್ತಿ ಇರುವುದರಿಂದ ಕುರಿ ಮೇಕೆ ಮತ್ತು ದನಗಳನ್ನು ಕಾಯುವಂತ ಯುವಕರು ಯಾವುದೇ ಕಾರಣಕ್ಕೂ ಮರಗಳು ಟ್ರಾನ್ಸ್ಫಾರ್ಮರ್ ಬಾಕ್ಸ್ ವಿದ್ಯುತ್ ಕಂಬಗಳು ಮುಂತಾದವುಗಳ ಆಶ್ರಯವನ್ನುಪಡೆಯ ಕೂಡದು ಆದಷ್ಟು ಇಂಥ ಪರಿಕರಗಳಿಂದ ದೂರ ಇರಬೇಕು ಈ ಬಗ್ಗೆ ಸ್ಥಳೀಯ ಪಂಚಾಯಿತಿ ಮಟ್ಟದಲ್ಲಿ ಜಾಗ್ರತೆ ಮೂಡಿಸಬೇಕು ಎಲ್ಲಾ ಪಂಚಾಯತಿ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಈ ಕ್ರಮ ತೆಗೆದು ಕೊಳ್ಳ ಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಯತ್ನಟ್ಟಿ ತಿಪ್ಪೇಸ್ವಾಮಿ ಮಾದನಹಟ್ಟಿ ಬಸಣ್ಣ ಮುದಿಯಪ್ಪ ಮಲ್ಲೂರಟ್ಟಿ ಗೌಡ್ರ ತಿಪ್ಪೇಸ್ವಾಮಿ ಗ್ರಾಮ ಪಂಚಾಯತಿ ಸದಸ್ಯ ಬೋರಣ್ಣ ನಾಗರಾಜು ರಾಜೇಶ್ವನಿರೀಕ್ಷಕರದ ಚೇತನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು