ನಾವು ನೆಲದ ಕಾನೂನನ್ನು ಗೌರವಿಸುತ್ತೇವೆ ಸಹಕರಿಸುತ್ತೇವೆ ಪಲಯನವಾದವಿಲ್ಲ

ರಾಜ್ಯ

BIG BREAKING

ನೆಲದ ಕಾನೂನನ್ನು ಗೌರವಿಸುತ್ತೇವೆ ಸಹಕರಿಸುತ್ತೇವೆ

ಚಿತ್ರದುರ್ಗ : ಮುರುಘಾ ಶರಣರ ವಿರುದ್ಧ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಯನ್ನು ಎಲ್ಲರು ಸೇರಿ ಒಟ್ಟಾಗಿ ಎದುರಿಸೋಣ ಎಂದು ಮುರುಘಾ ಶರಣರು ಹೇಳಿದರು.

 

 

 

ಚಿತ್ರದುರ್ಗದ ಮುರುಘಾ ಮಠದಲ್ಲಿ ಮಾತಾಡಿದ ಅವರು ಭಕ್ತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಬೇಡಿ, ಎದುರಾಗಿರುವ ಸಮಸ್ಯೆಯನ್ನು ಶಾಂತವಾಗಿ ಎದುರಿಸೋಣ, ಎಲ್ಲರು ಸೇರಿ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣೋಣ ಎಂದರು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಇದು ಮೊದಲಲ್ಲ, ಈತರ 15 ವರ್ಷಗಳಿಂದ ಘಟನೆಗೆಳು ನಡೆಯುತ್ತಲಿವೆ. ಮಠದ ಒಳಗಡೆ ಪಿತೂರಿಗಳು ನಡೆಯುತ್ತಿವೆ. ಇದಕ್ಕೆ ತಾಂತ್ವಿಕ ಅಂತ್ಯ ಕಾಣಬೇಕು ಎಂದು ತಿಳಿಸಿದರು. ಈ ನೆಲದ ಕಾನೂನು ಗೌರವಿಸುವಂತಹ ಮಠಾಧೀಶರಾಗಿದ್ದೇವೇ. ಪೀಠಾಧ್ಯಕ್ಷರಾಗಿದ್ದೇವೆ ನಿಂತುಕೊಳ್ಳುತ್ತೆವೆ ಎಂದು ತಿಳಿಸಿದರು. ಇಂತಹ ಗಾಳಿ ಸುದ್ದಿಗಳನ್ನು ನಂಬಬಾರದು ಎಂದು ಭಕ್ತರಿಗೆ ಶ್ರೀಗಳ ಕಿವಿಮಾತು ಹೇಳಿದರು.

ಮುರುಘಾ ಮಠ ಒಂದಾನೊಂದು ಕಾಲದಲ್ಲಿ ನ್ಯಾಯಲಯವಾಗಿತ್ತು. ಮುರುಘಾ ಮಠ ಪ್ರೀತಿಯಿಂದ ಅಕ್ಕರೆಯಿಂದ ನೋಡಿಕೊಂಡು ಬಂದಿರುವ ಮಠ. ಸಮಸ್ಯೆಯಿಂದ ಮುಕ್ತವಾಗಿ ಹೊರ ಬರುತ್ತೇನೆ. ಎಲ್ಲರಿಗೂ ಶುಭವಾಗಲಿ ಎಂದ ಶ್ರೀಗಳು. ಮತ್ತೊಂದು ಕಡೆ ಅಭಿಮಾನದ ಚಿಲಿಮೆಯನ್ನು ಚಿಮ್ಮಿಸಿದವರಿಗೆ ಒಳ್ಳೆಯದಾಗಲಿ ಎಂದರು.

Leave a Reply

Your email address will not be published. Required fields are marked *