ಜಿಎಸ್ ಮಂಜುನಾಥ್ ರನ್ನು ವಜಾಗೊಳಿಸಿ ಕೂಡಲೇ ಬಂಧಿಸಿ

ರಾಜ್ಯ

ಜಿಎಸ್ ಮಂಜುನಾಥ್ ರನ್ನು ವಜಾಗೊಳಿಸಿ ಕೂಡಲೇ ಬಂಧಿಸಿ

 

 

 

ಪ್ರಧಾನಿ ಮೋದಿ ಅವರ ವಿರುದ್ಧ ನಾಲಿಗೆ ಹರಿ ಬಿಟ್ಟ ಕಾರ್ಮಿಕ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿಎಸ್ ಮಂಜುನಾಥ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮುಖಂಡರು ಹಾಗು ಕಾರ್ಯಕರ್ತರು ಜಿಲ್ಲಾ ಕಾರ್ಯದರ್ಶಿ ಮೋಹನ್ ನೇತೃತ್ವದಲ್ಲಿ‌ ಜಿಲ್ಲಾಧಿಕಾರಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಮಂಜುನಾಥ್ ವಿರುದ್ದ ಘೋಷಣೆ ಹಾಕಿದರು. ಇದೇ ಸಮಯದಲ್ಲಿ ಮಾತಾಡಿದ ಮೋಹನ್, ಜಿಎಸ್ ಮಂಜುನಾಥ್ ಅವರು ದೇಶದ ಪ್ರಧಾನಿ ಹಾಗೂ ವಿಶ್ವ ಗುರು ಎನಿಸಿರುವ ಮೋದಿ‌ ಅವರ ವಿರುದ್ಧ ತುಚ್ಛವಾಗಿ ಮಾತಾಡಿರುವುದು ಸರಿಯಲ್ಲ. ಅವರನ್ನು ಈ‌ ಕೂಡಲೇ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಹಾಗೂ ಪೊಲೀಸರು ಕೂಡಲೇ ಬಂಧಿಸಬೇಕು, ಇಲ್ಲದೆ ಹೋದರೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕುತ್ತೇವೆ. ಮಂಜುನಾಥ್ ಅವರು ಕಂಡಲ್ಲಿ‌ ಅವರಿಗೆ ಕಾರ್ಯಕರ್ತರು ಮುತ್ತಿಗೆ ಹಾಕುತ್ತೇವೆ. ಆದ್ದರಿಂದ ಇನ್ನೆರಡು ದಿನಗಳಲ್ಲಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *