ಷರತ್ತುಬದ್ಧ ಜಾಮೀನಿನ ಮೇಲೆ ಇಂದು ಬಿಡುಗಡೆಗೊಂಡ ಮರುಘಾ ಶ್ರೀಗಳು

ದೇಶ

ಚಿತ್ರದುರ್ಗ ಮುರುಘಾ ಮಠದ ಮುರುಘಾ ಶ್ರೀಗಳಿಗೆ ಇಂದು ಜಾಮೀ‌ನಿನ ಮೇಲೆ ನ್ಯಾಯಾಲಯವು ಬಿಡುಗಡೆ ಗೊಳಿಸಿತು.
ಲೈಂಗಿಕ‌ ದೌರ್ಜನ್ಯದ ಆರೋಪದಲ್ಲಿ ಕಳೆದ 14 ತಿಂಗಳಿನಿಂದ ಶ್ರಿಗಳು ಕಾರಾಗೃಹದಲ್ಲಿ ಬಂಧನದಲ್ಲಿದ್ದರು. ಇಂದು ಬಿಡುಗಡೆಯ ಆದೇಶವನ್ನು 2 ನೇ ಅಪರ ಜಿಲ್ಲಾ ಮತ್ತು ಸತ್ರ  ನ್ಯಾಯಾಲಯವು ಹೈಕೋರ್ಟ್ ನ ಆದೇಶವನ್ನು ಪಾಲಿಸಿತು. ಕಳೆದ 14 ತಿಂಗಳಿನಿಂದ ಕಾರಾಗೃಹದಲ್ಲಿದ್ದ ಮುರುಘಾ ಶರಣರನ್ನು ಬಿಡುಗಡೆಗೊಳಿಸಿದ್ದು, ಜಾಮೀನಿನ ಷರತ್ತಿನನ್ವಯ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಕಾಲಿಡುವಂತಿಲ್ಲ, ಅದ್ದರಿಂದ ಮುರುಘಾ ಮಠದ ಪ್ರಭಾರೆ ವಹಿಸಿಕೊಂಡಿರುವ ಬಸವಲಿಂಗ ಶ್ರಿಗಳು, ಭಕ್ತರು ದಾವಣಗೆರೆ ಜಿಲ್ಲೆ ಕಡೆಗೆ ಕರೆದೊಯ್ದದಿದ್ದು, 2 ನೇ ಪ್ರಕರಣದ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ.

 

 

 

Leave a Reply

Your email address will not be published. Required fields are marked *