ಚಿತ್ರದುರ್ಗ ಮುರುಘಾ ಮಠದ ಮುರುಘಾ ಶ್ರೀಗಳಿಗೆ ಇಂದು ಜಾಮೀನಿನ ಮೇಲೆ ನ್ಯಾಯಾಲಯವು ಬಿಡುಗಡೆ ಗೊಳಿಸಿತು.
ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಕಳೆದ 14 ತಿಂಗಳಿನಿಂದ ಶ್ರಿಗಳು ಕಾರಾಗೃಹದಲ್ಲಿ ಬಂಧನದಲ್ಲಿದ್ದರು. ಇಂದು ಬಿಡುಗಡೆಯ ಆದೇಶವನ್ನು 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಹೈಕೋರ್ಟ್ ನ ಆದೇಶವನ್ನು ಪಾಲಿಸಿತು. ಕಳೆದ 14 ತಿಂಗಳಿನಿಂದ ಕಾರಾಗೃಹದಲ್ಲಿದ್ದ ಮುರುಘಾ ಶರಣರನ್ನು ಬಿಡುಗಡೆಗೊಳಿಸಿದ್ದು, ಜಾಮೀನಿನ ಷರತ್ತಿನನ್ವಯ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಕಾಲಿಡುವಂತಿಲ್ಲ, ಅದ್ದರಿಂದ ಮುರುಘಾ ಮಠದ ಪ್ರಭಾರೆ ವಹಿಸಿಕೊಂಡಿರುವ ಬಸವಲಿಂಗ ಶ್ರಿಗಳು, ಭಕ್ತರು ದಾವಣಗೆರೆ ಜಿಲ್ಲೆ ಕಡೆಗೆ ಕರೆದೊಯ್ದದಿದ್ದು, 2 ನೇ ಪ್ರಕರಣದ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ.