ಕರ್ತವ್ಯ ಲೋಪ ಮೂರು ಜನ ಹಾಸ್ಟೆಲ್ ಸಿಬ್ಬಂದಿ ಅಮಾನತ್ತು

ಜಿಲ್ಲಾ ಸುದ್ದಿ

ಕರ್ತವ್ಯ ಲೋಪ ಮೂರು ಜನ ಹಾಸ್ಟೆಲ್ ಸಿಬ್ಬಂದಿ ಅಮಾನತ್ತು

 

 

 

ಚಿತ್ರದುರ್ಗ ತಾಲೂಕಿನ ಡಿಎಸ್ ಹಳ್ಳಿ ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯದ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ 31- 3-23 ರಂದು ಭೇಟಿ ನೀಡಿದ್ದರು. ಈ ಸಮಯದಲ್ಲಿ ಅಲ್ಲಿನ ಸಿಬ್ಬಂದಿಗಳು ಹಾಸ್ಟೆಲ್ ಗೆ ಬೇಗ ಹಾಕಿಕೊಂಡು ತೆರಳಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆಯು ನಡೆಯುತ್ತಿದ್ದು ಅವರಿಗೆ ಹೆಚ್ಚಿನ ಬೋಧನೆಯನ್ನು ಮಾಡಿ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆದೇಶವನ್ನು ನೀಡಲಾಗಿತ್ತು. ಆದರೆ ಸರಿಯಾದ ನಿಟ್ಟಿನಲ್ಲಿ ಕರ್ತವ್ಯವನ್ನು ನಿರ್ವಹಿಸದೆ ಕರ್ತವ್ಯ ಲೋಪ ಮಾಡಿರುವ ಮೂವರನ್ನು ಸಮಾಜ ಕಲ್ಯಾಣ ಇಲಾಖೆ ಮಾಹಿತಿ ಆಧರಿಸಿ ಎಲ್ ರಾಜು ದಿನಗೂಲಿ ಅಡುಗೆ ಸಹಾಯಕ, ವೆಂಕಟೇಶ್ ಅಡುಗೆಯವ ಮತ್ತು ಸಿ ಹನುಮಂತಪ್ಪ ಎಂಬ ನೌಕರರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *