ಪ್ರಿಯತಮೆಯ ಮಗನಿಗೆ ಬರೆಹಾಕಿದ ಆರೋಪಿ ಆತ್ಮಹತ್ಯೆಗೆ ಯತ್ನ

ಕ್ರೈಂ ಜಿಲ್ಲಾ ಸುದ್ದಿ

 

ಚಿತ್ರದುರ್ಗ: ಪ್ರಿಯತಮೆಯ ಮಗನಿಗೆ ಬರೆಹಾಕಿ ಕೈ ಮುರಿಯುವಂತೆ ಥಳಿಸಿದ್ದ ಆರೋಪಿ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

Chitradurga aropi shivamurthy suicide attempt

 

 

 

ಆರೋಪಿ ಶಿವಮೂರ್ತಿ ( 30) ಬಂಧನ ಭೀತಿಯಿಂದ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿರುವ ಆರೋಪಿ, ಹೊಳಲ್ಕೆರೆ ತಾಲೂಕಿನ ಘಟ್ಟಿ ಹೊಸಹಳ್ಳಿ ಗ್ರಾಮದವನು ಆರೋಪಿಯನ್ನು ಪೋಲಿಸರು ಕೊಳ್ಳೆಗಾಲದಲ್ಲಿ ವಶಕ್ಕೆ ಪಡೆದು ಚಿತ್ರದುರ್ಗಕ್ಕೆ ಕರೆ ತರುವಾಗ ಹಿರಿಯೂರಿನ ವೃತ್ತದಲ್ಲಿ ವಿಷ ಸೇವಿಸಿದ್ದಾನೆ. ಕೂಡಲೇ ಪೋಲಿಸರು ಇವನನ್ನು ಆಸ್ಪತ್ರೆಗೆ ಕರೆದು ತಂದು ಚಿಕಿತ್ಸೆ ಕೊಡಿಸಿದ್ದಾರೆ.

Chitradurga aropi shivamurthy suicide attempt

ಘಟನೆ ಹಿನ್ನೆಲೆ: ಶಿವಮೂರ್ತಿ, ನಿಂಗಮ್ಮ ( ಶೃತಿ) ಎಂಬಾಕೆ ಜಯಪ್ಪನೊಂದಿಗೆ ಮದುವೆಯಾಗಿ ಏಳು ವರ್ಷ ಕಳೆದಿದ್ದು, ಇಬ್ಬರ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಈ ಮಕ್ಕಳಲ್ಲಿ ಗುಂಡು ಮಗುವಿನೊಂದಿಗೆ ಒಂದು ಮುದ್ದಾದ ಗಂಡು ಮಗು ಕೂಡ ಇತ್ತು. ಆದರೆ
ಇದು ಸಾಲದೆಂಬಂತೆ ನಿಂಗಮ್ಮ (ಶೃತಿ), ಯುವಕ ಶಿವಮೂರ್ತಿಯ ಪ್ರೀತಿಯಬಲೆಗೆ ಬಿದಿದ್ದಿದರು. ಮೂಲತಃ ನಿಂಗಮ್ಮ (ಶೃತಿ) ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದವಳು. ಇತ್ತೀಚೆಗೆ ಘಟ್ಟಿ ಹೊಸಹಳ್ಳಿ ಗ್ರಾಮದ ಶಿವಮೂರ್ತಿಯೊಂದಿಗೆ ಬೆಳೆದ ಸಲಿಗೆ, ಪ್ರೀತಿಯಾಗಿ ಆಕೆ ಮನೆ ಮತ್ತು ಗಂಡನನ್ನೇ ಬಿಟ್ಟು
ಆರು ವರ್ಷದ ಮಗುವಿನೊಂದಿಗೆ ಬಂದ ಶೃತಿ ಕೆಲ ದಿನಗಳಿಂದ ಗಟ್ಟಿ ಹೊಸಹಳ್ಳಿಯಲ್ಲಿ ಪ್ರಿಯಕರ ಶಿವಮೂರ್ತಿ ಜೊತೆ ಆಂಧ್ರಾದ ಓಬಳಾಪುರದಲ್ಲಿ ವಾಸವಾಗಿದ್ದಳು. ಏನು ಅರಿಯದ ಪ್ರಿಯತಮೆಯ ಮುಗ್ಧ ಮಗುವಿಗೆ ನೀನು ನನ್ನನ್ನು ಅಪ್ಪ ಎಂದು ಕರೆಯಬೇಕು ಎಂದು ಹೇಳಿ ಆಂಧ್ರ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿದ್ದ ಶಿವಮೂರ್ತಿ, ಮಗುವಿನ ಕಾಲು ಹಾಗೂ ಕೈ ಮೇಲೆ ಕಾದಿದ್ದ ಕಬ್ಬಿಣದ ಸರಳಿನಿಂದ
ಬರೆ ಹಾಕಿದ್ದನು.ಜೊತೆಗೆ ಚಪಾತಿ ಲಟ್ಟಿಸುವ ಲಟ್ಟಣಿಗೆಯಿಂದ ಆರೋಪಿ ಮಗುವಿನ ಮೇಲೆ ಹಲ್ಲೆ ಮಾಡಿದ್ದನು.ಗಾಯಗಳಿಂದ ನರಳಾಡುತ್ತಿದ್ದ ಬಾಲಕನನ್ನು ಗಮನಿಸಿದ ಗ್ರಾಮಸ್ಥರು ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು.
ಬಾಲಕ ಬಳಿಕ ತನಗಾಗುತ್ತಿರುವ ಚಿತ್ರಹಿಂಸೆ ಬಗ್ಗೆ ಪೊಲೀಸರ ಮುಂದೆ ವಿವರವಾಗಿ ಬಿಚ್ಚಿಟ್ಟಿದ್ದ. ಆರೋಪಿ ಶಿವಮೂರ್ತಿ ವಿರುದ್ಧ ಚಿತ್ರಹಳ್ಳಿ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದಂತೆ ಮಾಹಿತಿ ತಿಳಿದು ಆತಂಕಗೊಂಡಿದ್ದ ಆರೋಪಿ ಶಿವಮೂರ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು,
ಪೊಲೀಸರ ಸಮಯಪ್ರಜ್ಞೆಯಿಂದ ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *