ಚಿತ್ರದುರ್ಗ: ನಮ್ಮ ಅಧಿಕಾರವಿದ್ದಾಗ ಎಲ್ಲಾ ಬೈ ಎಲೆಕ್ಷನ್ ಗಳನ್ನು ಗೆದ್ದಿದ್ದೆವು, ಆಗ ಇವನೇನು ಆಗಿದ್ದನಂತೆ (ಕಟೀಲ್) ಇಲಿ ಬಿಲ ಸೇರಿಕೊಂಡಿದ್ದನಾ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಉಪ ಚುನಾವಣೆಗಳಲ್ಲಿ ಗೂಡು ಸೇರಿಕೊಳ್ಳಬೇಕು ಬಂಡೆ ಚೂರಾಗಿದೆ ಎಂದು ವ್ಯಂಗ್ಯವಾಡಿದ್ದ ಕಟೀಲ್ ಗೆ ಸಿದ್ದರಾಮಯ್ಯ ತಿರುಗೇಟು ನೀಡಿ, ನಳೀನ್ ಕುಮಾರ್ ಕಟೀಲ್ ಇನ್ನು ಅಪ್ರಬುದ್ಧ ರಾಜಕಾರಣಿ, ಬಿಜೆಪಿ ಬೈಎಲೆಕ್ಷನ್ ಸೋತು ಎಲ್ಲಿಯಾದರು ರಾಜೀನಾಮೆ ನೀಡಿದ್ದರ? ದೆಹಲಿಯಲ್ಲಿ ಪ್ರಧಾನಿ ಪ್ರಚಾರ ಮಾಡಿದ್ದರು, ಸೋತರು ಅವರು ರಾಜೀನಾಮೇ ನೀಡಿದ್ದರ? ಸಿದ್ದರಾಮಯ್ಯ ಅಯೋಗ್ಯ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಈಶ್ವರಪ್ಪ ಅಯೋಗ್ಯ ಅವನು ಮಂತ್ರಿಯಾಗಲು ನಾಲಾಯಕ್ ಎಂದು ಮಾತಿನ ಚಾಟಿಯಿಂದ ತಿವಿದರು.
ಸಂಯುಕ್ತವಾಣಿ.
ಡಿ.ಕುಮಾರಸ್ಚಾಮಿ