ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ನಿವೃತ್ತ ಹಿರಿಯ ಐ.ಎ.ಎಸ್.ಅಧಿಕಾರಿ,ಚಲನ ಚಿತ್ರ ನಟ ಹಾಗೂ ಛಲವಾದಿ ಮಹಾ ಸಭಾದ ರಾಜ್ಯಾಧ್ಯಕ್ಷರಾದ ಕೆ.ಶಿವರಾಮ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕೆ. ಶಿವರಾಂ ಅವರು ಕನ್ನಡದಲ್ಲಿ ಐಎಎಸ್ ಬರೆದು ಸಾಧನೆ ಮಾಡಿದವರಲ್ಲಿ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕರ್ತವ್ಯದಿಂದ ನಿವೃತ್ತರಾದ ಮೇಲೆ ಛಲವಾದಿ ಮಹಾಸಭಾವನ್ನು ಸಂಸ್ಥಾಪಿಸಿದ್ದರು. ಸಮಾಜವನ್ನು ಒಗ್ಗೂಡಿಸುವ ಕೆಲಸಕ್ಕೆ ಕೈ ಹಾಕಿದ್ದರು. ರಾಜಕಾರಣದಲ್ಲಿಯೂ ಸಕ್ರಿಯರಾಗಿದ್ದರು. ಇಂತಹ ಅಧಿಕಾರಿಗೆ ಛಲವಾದಿ ಮಹಾ ಸಭಾದ ಜಿಲ್ಲಾ ಅಧ್ಯಕ್ಷರಾದ ಹೆಚ್.ಶೇಷಪ್ಪ,ಗೌರವಧ್ಯಕ್ಷ ಹೆಚ್.ಅಣ್ಣಪ್ಪಸ್ವಾಮಿ,ತಿಪ್ಪೇಸ್ವಾಮಿ,ಚಂದ್ರಶೇಖರ, ರಂಗಸ್ವಾಮಿ,ಎನ್ .ತಿಪ್ಪೇಸ್ವಾಮಿ,ಬಾಬು,ನವೀನ್, ಮತ್ತು ಇತರರು ಇದ್ದರು.