ಬೆಂಗಳೂರು: ಕೋಟ್ಯಾಂತರ ಅಭಿಮಾನಿಗಳ ಅರಾಧ್ಯ ದೈವವೇ ಆಗಿರುವ ಡಾ. ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ದ್ವಂಸ ಮಾಡಿರುವ ಘಟನೆ ಬೆಂಗಳೂರಿನ ಮಾಗಡಿ ಟೋಲ್ ಗೇಟ್ ಬಳಿ ನಡೆದಿದೆ.
ತಡ ರಾತ್ರಿ ಯಲ್ಲಿ ಡಾ. ವಿಷ್ಣು ವರ್ಧನ್ ಅವರ 12 ಅಡಿಗಳ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಅವಮಾನ ಮಾಡಲಾಗಿದೆ. ಈ ಮೊದಲು ಒಂದು ಪ್ರತಿಮೆಯನ್ನು ಕದ್ದು ಒಯ್ಯಲಾಗಿತ್ತು. ಇದೀಗ ಮತ್ತೆ
ಇಲ್ಲಿನ ಕೆಲ ಕಿಡಿಗೇಡಿಗಳು ಇಲ್ಲಿ ಪ್ರತಿಮೆ ಅನಾವರಣ ಮಾಡದಂತೆ ತಾಕೀತು ಮಾಡಿದ್ದರು. ಒಂದು ವಾರದೊಳಗೆ ಪ್ರತಿಮೆಯನ್ನು ಧ್ವಂಸ ಮಾಡುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಕೆಲ ಕಿಡಿಗೇಡಿಗಳು ಅವರೇ ಮಾಡಿರುವ ಶಂಕೆ ಇದೆ ಎಂದು ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸಂಯುಕ್ತವಾಣಿ