ಮುಂದಿನ ಅಧಿವೇಶನದಲ್ಲಿನ ಲವ್ ಜಿಹಾದಿಗೆ ಕಡಿವಾಣ

ಜಿಲ್ಲಾ ಸುದ್ದಿ ರಾಜಕೀಯ

ಚಿತ್ರದುರ್ಗ: ಗೋಹತ್ಯೆ ನಿಷೇಧಿಸಿರುವಂತೆ ಲವ್‌ಜಿಹಾದ್‌ಗೆ ಕಡಿವಾಣ ಹಾಕಿ ಗೋಮಾತೆ ಮತ್ತು ಹೆಣ್ಣನ್ನು ರಕ್ಷಿಸುತ್ತೇವೆ. ಕಾಂಗ್ರೆಸ್‌ನಂತೆ ನಮ್ಮದು ಕ್ರಾಸ್‌ಬೀಡ್ ಸಂಸ್ಕೃತಿಯಲ್ಲ ಎಂದು ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ವಿರೋಧಿಗಳ ವಿರುದ್ದ ವಾಗ್ದಾಳಿ ನಡೆಸಿದರು.

 

 

 

Chitradurga  wl ban love jihad in next adhiveshana
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಚಳ್ಳಕೆರೆಗೆ ಹೊರಟಿದ್ದ ಅವರು ಶುಕ್ರವಾರ ಐಶ್ವರ್ಯಫೋರ್ಟ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ ಮುಸಲ್ಮಾನರನ್ನು ಸಂತೃಪ್ತಿ ಪಡಿಸುವುದಕ್ಕಾಗಿ ಕಾಂಗ್ರೆಸ್‌ನವರು ಗೋಹತ್ಯೆ ನಿಷೇಧ ಕಾಯಿದೆಯನ್ನು ವಿರೋಧಿಸುತ್ತಿದ್ದಾರೆ. ತುಷ್ಟಿಕರಣದ ರಾಜಕಾರಣ ತುಂಬಾ ದಿನ ಬಾಳಿಕೆ ಬರುವುದಿಲ್ಲ. ಗೋವನ್ನು ಮಾತೆ ಎಂದು ಪೂಜಿಸುವುದು ಹಿಂಧುತ್ವ. ಲವ್‌ಜಿಹಾದ್ ಹೆಸರಿನಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಬೇರೆ ಬೇರೆ ರಾಜ್ಯ, ದೇಶಗಳಿಗೆ ಮಾರಾಟ ಮಾಡುವವರ ವಿರುದ್ದ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಂರ್ತಜಾತಿ ವಿವಾಹ ಒಪ್ಪುತ್ತೇನೆ. ಆದರೆ ಲವ್‌ಜಿಹಾದನ್ನು ನಮ್ಮ ಪಕ್ಷ ಸಹಿಸುವುದಿಲ್ಲ. ಭಾರತೀಯ ಸಂಸ್ಕೃತಿಯನ್ನು ಗೌರವಿಸುವುದೇ ಬಿಜೆಪಿ.ಅಜೆಂಡ ಎಂದರು.
ಸಂಯುಕ್ತವಾಣಿ

Leave a Reply

Your email address will not be published. Required fields are marked *