ಕಾರ್ಯಭಾರ ತಾಳಲಾರೆ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡ್ರಾ ಗುರುಲಿಂಗಪ್ಪ

ಕ್ರೈಂ

ಸರ್ಕಾರಿ ನೌಕರನೊಬ್ಬ ಕಚೇರಿಯ ಕಾರ್ಯಭಾರ ತಾಳಲಾರದೆ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಚಳ್ಳಕೆರೆಯ ವಾಲ್ಮೀಕಿ ನಗರದಲ್ಲಿ ನಡೆದಿದೆ. ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಭೂಮಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಚುನಾವಣೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಲಿಂಗಪ್ಪ(52) ಡೆತ್ ನೋಟ್ ಬರೆದಿಟ್ಟು ಅದರಲ್ಲಿ ಕಾರ್ಯಭಾರ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿಟ್ಟು ಮನೆಯ ರೂಮಿನಲ್ಲಿ ವೈರಿನಿಂದ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪಿಎಸ್ ಐ ಶಿವರಾಜ್ ಹಾಗೂ ಕಸಬಾ ಕಂದಾಯ ನಿರೀಕ್ಷಕ ಲಿಂಗೇಗೌಡ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಚಳ್ಳಕೆರೆ ಠಾಣೆ ಪೋಲಿಸ್ ತನಿಖೆಯಿಂದ ಆತ್ಮಹತ್ಯೆಯ ಸತ್ಯಾಸತ್ಯತೆ ತಿಳಿಯಬೇಕಿದೆ.

 

 

 

Leave a Reply

Your email address will not be published. Required fields are marked *