ಸ್ವಾಮೀಜಿ ಸೇರಿ ನಾಲ್ವರಿಗೆ ಕೊಲೆ ಬೆದರಿಕೆ

ಕ್ರೈಂ

ಚಿತ್ರದುರ್ಗದ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಶಾಸಕರಾದ ಎಂ. ಚಂದ್ರಪ್ಪ ಹಾಗೂ ಗೂಳಿಹಟ್ಟಿ ಶೇಖರ್ ಸೇರಿ ಹಲವರಿಗೆ ಕೊಲೆ ಬೆದರಿಕೆ ಸಂದೇಶ ಬಂದಿತ್ತು. ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ KSP ಆ್ಯಪ್ ಮೂಲಕ ಕೊಲೆ ಬೆದರಿಕೆ ಸಂದೇಶ ಬಂದಿತ್ತು. ಸಿದ್ದರಾಮೇಶ್ವರ ಸ್ವಾಮೀಜಿ, ಹೊಳಲ್ಕೆರೆ MLA M.ಚಂದ್ರಪ್ಪ, ಹೊಸದುರ್ಗ MLA ಗೂಳಿಹಟ್ಟಿ ಶೇಖರ್ ಸೇರಿ ಹಲವರ ಹೆಸರು ಕೂಡಾ ಉಲ್ಲೇಖವಾಗಿತ್ತು. ಈ ಪ್ರಕರಣವನ್ನ ಜಿಲ್ಲಾ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದ್ದು ತನಿಖೆ ಆರಂಭಿಸಿದೆ. ಇನ್ನೂ ಈ ಕುರಿತು ಸ್ಪಷ್ಟನೆ ನೀಡಿರುವ SP ಕೆ. ಪರಶುರಾಮ್ ಕೊಲೆ ಬೆದರಿಕೆ ಸಂದೇಶ ನಮ್ಮ ಕಚೇರಿಗೆ KSP ಆ್ಯಪ್ ಮೂಲಕ ನಿನ್ನೆ ಸಂಜೆ ಬಂದಿದೆ. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದಿದ್ದಾರೆ. ಅಲ್ಲದೆ ಬೋವಿ ಸಮುದಾಯದ ಸ್ವಾಮೀಜಿ, ಶಾಸಕರು ಹಾಗೂ ಮುಖಂಡರ ಹೆಸರನ್ನ ಉಲ್ಲೇಖ ಮಾಡಿದ್ದು, ಹತ್ಯೆಗೆ ಸಂಚು ರೂಪಿಸಿದ್ದಾರೆಂದು ಬರೆಯಲಾಗಿದೆ. ಅಲ್ಲದೆ ಕೊಲೆಗೆ ಸಂಚು ರೂಪಿಸಿದ ನಾಲ್ಕು ಮಂದಿ ಹೆಸರನ್ನು ಕೂಡಾ ಉಲ್ಲೇಖಿಸಿದ್ದು, ಈ ಕುರಿತು ತನಿಖೆ ಆರಂಭಿಸಿರುವುದಾಗಿ ಎಸ್ಪಿ ಪರಶುರಾಮ್ ತಿಳಿಸಿದ್ದಾರೆ.

 

 

 

 

ಇನ್ನೂ ಈ ಬೆನ್ನಲ್ಲೇ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಕೂಡಾ ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಚೇರಿಗೆ ರಕ್ಷಣೆ ಕೋರಿ ಮನವಿ ಪತ್ರ ರವಾನಿಸಿದ್ದಾರೆ. ಮಠದ ಆಸ್ತಿಗಳಿಗೆ ಕೆಲ ದುಷ್ಕರ್ಮಿಗಳಿಂದ ಅಪಾಯವಿದೆ ಯಾವುದೇ ಕಾರಣಕ್ಕೂ ತೊಂದರೆ ಆಗದಂತೆ ರಕ್ಷಣೆ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *