ಮಾದರಿ ಜೀವನ ನಡೆಸಲು ಓ ಪರಮೇಶ್ವರಪ್ಪ ಕರೆ

ಜಿಲ್ಲಾ ಸುದ್ದಿ

 

 

 

 

ಚಿತ್ರದುರ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಇಂದು ಪರಿಶಿಷ್ಟ ಪಂಗಡದ ವಿಧವೆಯವರು ಪುನರ್ ವಿವಾಹ ಪ್ರೋತ್ಸಾಹ ಧನ ದಡಿಯಲ್ಲಿ ಹೊಳಲ್ಕೆರೆ ತಾಲ್ಲೂಕಿನ ಕೆ ಮಂಜುಳಾ ಕೋಂ ರಂಗಸ್ವಾಮಿ ಚನ್ನಪಟ್ಟಣ ಇವರುಗಳು ಪುನರ್ವಿವಾಹವಾಗಿದ್ದು, ಇಲಾಖೆಯಿಂದ ಮೂರು ಲಕ್ಷ ರೂಗಳ ಚೆಕ್ಕುಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸರ್ಕಾರವು ವಿಧವೆಯವರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಉತ್ತಮ ಹಾಗೂ ಪರಿಣಾಮಕಾರಿ ಕಾರ್ಯಕ್ರಮವನ್ನು ಮಾಡಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಲು ಜಿಲ್ಲಾ ಎಸ್ಟಿ‌ ಕಲ್ಯಾಣಾಧಿಕಾರಿ ಓ ಪರಮೇಶ್ವರಪ್ಪ ಕರೆ ನೀಡಿದರು. ಮಹಿಳೆಯರ ಪುನಶ್ಚೇತನ ಹಾಗೂ ಆರ್ಥಿಕ ಸದೃಢತೆ ಗೊಳಿಸಲು ಇಂಥ ಕಾರ್ಯಕ್ರಮಗಳು ಅತ್ಯುತ್ತಮವಾಗಿದೆ. ಜೀವನದ ಹಿಂದಿನ ಕಹಿ ಘಟನೆಗಳನ್ನು ಮರೆತು ಸಹಬಾಳ್ವೆ ಜೀವನ ನಡೆಸುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಕಚೇರಿಯ ಅಧೀಕ್ಷಕ ದಯಾನಂದ ವಿಷಯ ನಿರ್ವಹಕಿ ನಾಗರತ್ನಮ್ಮ ಇವರ ಮಾರ್ಗದರ್ಶನದಲ್ಲಿ ಚೆಕ್ ನೀಡಲಾಯಿತು.

Leave a Reply

Your email address will not be published. Required fields are marked *