ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭದ ಅಂಗವಾಗಿ ಚಳ್ಳಕೆರೆ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಇಂದು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಅನ್ನಸಂತರ್ಪಣೆ ಮಾಡಿಸಲಾಯಿತು.ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಚಳ್ಳಕೆರೆ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಚೌಳೂರು ಗ್ರಾ ಪಂ ಅಧ್ಯಕ್ಷೆ ಕಾವ್ಯ ವಿಜಯ್ ಕುಮಾರ್,ಸದಸ್ಯರಾದ ಮೂರ್ತೆಪ್ಪ, ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನ ಅರ್ಚಕರು, ಗ್ರಾಮದ ಮುಖಂಡರಾದ ವೀರಭದ್ರಪ್ಪ, ಹನುಮಂತರಾಯ,ರವಿ,ಉಮೇಶ್,ಹನುಮಂತರಾಯ,ತಿಪ್ಪೇಸ್ವಾಮಿ, ಮುಸ್ಲೀಂ ಜನಾಂಗದ ಯುವ ಮುಖಂಡ ಮುಸ್ತಾಫ್, ಹಾಗೂ ಊರಿನ ಮುಖಂಡರು, ಯುವಕರು ಗ್ರಾಮದವರು ಉಪಸ್ಥಿತರಿದ್ದರು.