ಶ್ರೀ ತಿಪ್ಪೇಶನ ಮುಕ್ತಿ ಬಾವುಟ ಹರಾಜಿನಲ್ಲಿ ಭಾಗವಹಿಸುವವರು ಮುಂಗಡ ಚಕ್ ನೀಡಬೇಕು

ರಾಜ್ಯ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವದ ಅಂಗವಾಗಿ ಸ್ವಾಮಿಯ ಮುಕ್ತಿ ಭಾವುಟದ ಹರಾಜು ಮಾಡಲಾಗುತ್ತದೆ. ಮುಕ್ತಿ ಬಾವುಟ ಹರಾಜಿನಲ್ಲಿ ಭಾಗವಹಿಸುವವರು ರಥೋತ್ಸವದ ಚಾಲನೆ ಸಮಯ 3 ಗಂಟೆಗೆ ಖುದ್ದು ಹಾಜರರಿಬೇಕೆಂದು ಮಠದ ಆಡಳಿತಾಧಿಕಾರಿಗಳು ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಶಸ್ವಿ ಹರಾಜುದಾರರು ಮೊದಲ‌ ಪಾರ್ಟಿಯಾಗಿ, ಎರಡನೇ ಪಾರ್ಟಿಯಾಗಿ ಕಾರ್ಯನಿರ್ವಹಣಾಧಿಕಾರಿಯಾಗಿಯೂ ಇರುತ್ತಾರೆ. ಹರಾಜಿನ ಮೊತ್ತವನ್ನು ಪಾವತಿಸುವ ಬಗ್ಗೆ ನೂರು ರೂಪಾಯಿ ಬೆಲೆಯ ಛಾಪ ಕಾಗದದ ಒಪ್ಪಂದ ಪತ್ರದಲ್ಲಿ ಒಪ್ಪಿ ಒಂದು ಮುಂಗಡ ದಿನಾಂಕದ ಚಕ್ ನೀಡಲು ಬದ್ದರಾಗಿರಬೇಕು. ಹಿಂದಿನ ವರ್ಷ ಮುಕ್ತಿ ಬಾವುಟದ ಹರಾಜಿನಲ್ಲಿ ಭಾಗವಹಿಸಿ ಹರಾಜು ಮೊತ್ತವನ್ನು ಪಾವತಿಸಲು ವಿಳಂಬ ಮಾಡಿರುವ ಭಕ್ತರು ಹಾಗೂ ವ್ಯಕ್ತಿಗಳಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

 

 

 

Leave a Reply

Your email address will not be published. Required fields are marked *