ತಾಯಿಯನ್ನು ನಂಬಿ ಅವಳ ಕೈ ಹಿಡಿದು ಹೋದವರಿಗಾದ ಗತಿಯೇನು: ಚಿತ್ರದುರ್ಗದಲ್ಲೊಂದು ಮನಕಲಕುವ ಘಟನೆ…

ರಾಜ್ಯ

 

ಶಿಶು ವಿಹಾರಕ್ಕೆ ಹೋಗಿ ಬರುತ್ತೆವೆಂದು ಹೊರಟವರು ಮಸಣ ಸೇರಿದರು

ಹೆತ್ತ ಮಕ್ಕಳಿಬ್ಬರನ್ನು ಬೆಂಕಿಗೆ ಹಾಕಿ ತಾನು ಬೆಂಕಿಗೆ ಹಾರಿ ಮಹಿಳೆ ಆತ್ಮಹತ್ಯೆ

 

 

 

 

ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬರು ಇಬ್ಬರು ಮಕ್ಕಳಿಬ್ಬರ ಜೊತೆ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳುಕು ಹೋಬಳಿ ವ್ಯಾಪ್ತಿಯ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ.

ಮಲ್ಲಸಮುದ್ರ ಗ್ರಾಮದ ತಲಾರಿ ಮಾರಕ್ಕ (24) ಮಕ್ಕಳಾದ ನಯನ (4) ಹರ್ಷವರ್ಧನ (2) ಮೃತಪಟ್ಟವರು.
ಜಾಲಿ ಗಿಡದ ಬೇಲಿಯಲ್ಲಿ ಪೆಟ್ರೋಲ್‌ ಸುರಿದುಕೊಂಡು ಬೆಂಕಿಗೆ ಆಹುತಿಯಾಗಿದ್ದಾರೆಂದು ತಳಕು ಠಾಣೆ ಪೊಲೀಸರು ತಿಳಿಸಿದ್ದಾರೆ.ಇಂದು ಮಧ್ಯಾಹ್ನ ಮಕ್ಕಳನ್ನು ಕರೆದುಕೊಂಡು ಗ್ರಾಮದ ಹೊರಭಾಗಕ್ಕೆ ತೆರಳಿದ ಮಾರಕ್ಕ ಮಕ್ಕಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾಳೆ. ಇದೇ ಬೆಂಕಿಗೆ ಮಾರಕ್ಕ ಕೂಡ ಆಹುತಿಯಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿಯನ್ನು ಗಮನಿಸಿದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ನಂದಿಸುವ ಹೊತ್ತಿಗೆ ಮೂರು ಜೀವಗಳು ಸುಟ್ಟು ಕರಕಲಾಗಿದ್ದವು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿನಾರಾಯಣ, ಡಿವೈಎಸ್‌ಪಿ ರಾಜಣ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಳಕು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಲೈಟ್ ಹಾಕುವ ವಿಚಾರಕ್ಕೆ ಸೊಸೆಗೆ ಬೈದಿದ್ದು ನಿಜ ಅವಳು ಹೀಗೆ ಮಾಡುತ್ತಾಳೆಂದು ಸುಳಿವು ಸಿಗಲಿಲ್ಲ ಎಂದು ಮಾವ ಮುರಾರಿ ನೋವಿನಂದ ಹೇಳುತ್ತಾರೆ.

Leave a Reply

Your email address will not be published. Required fields are marked *